ಸಮಾಜ ಮುಖ್ಯವಾಹಿನಿಗೆ ತರಲು ಪ್ರಯತ್ನ

ದಿ ಡೈಲಿ ನ್ಯೂಸ್ ತಿ.ನರಸೀಪುರ
ಮಡಿವಾಳ ಸಮುದಾಯವನ್ನು ತಾಲೂಕಿನಲ್ಲಿ ಸಂಘಟಿಸುವ ಮೂಲಕ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಸಂಘದ ಪದಾಧಿಕಾರಿಗಳ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಮಾಡುತ್ತೇನೆಂದು ತಾಲೂಕು ವೀರ ಮಡಿವಾಳ ಮಾಚಿದೇವರ ಸಂಘದ ನೂತನ ಅ‘್ಯಕ್ಷ ಆಲಗೂಡು ಬಿ.ಬಸವರಾಜು ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ತಾಲೂಕು ವೀರ ಮಡಿವಾಳ ಮಾಚಿದೇವರ ಸಂಘದ ನೂತನ ಅ‘್ಯಕ್ಷರಾಗಿ ಆಯ್ಕೆಯಾದ ನಂತರ ಸಂಘದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ, ಬಸವರಾಜು ಮಡಿವಾಳ ಸಮುದಾಯ ತೀರಾ ಹಿಂದುಳಿದಿದ್ದು ಸಮುದಾಯದ ಹಿತಕ್ಕಾಗಿ ಸಂಘ ದುಡಿಯಲಿದೆ. ಮಡಿವಾಳ ಜನಾಂಗ ಶೈಕ್ಷಣಿಕ ಆರ್ಥಿಕ ಹಾಗೂ ರಾಜಕೀಯವಾಗಿ ಸರಿಯಾದ ಸ್ಥಾನಮಾನ ಸಿಗದೆ ಸಮಾಜದ ಕಟ್ಟಕಡೆಯಲ್ಲಿದೆ ಇಂದು ಸಹ ಹಲವಾರು ಸಮಸ್ಯೆಗಳನ್ನು ನಮ್ಮ ಜನಾಂಗ ಎದುರಿಸುತಿದ್ದು ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಸಂಘ ಬದ್ದವಾಗಿರುತ್ತದೆ ತಾಲೂಕಿನಾದ್ಯಂತ ಸಮುದಾಯಕ್ಕೆ ತೊಂದರೆಯಾದರೆ ಅಲ್ಲಿ ಸಂಘ ಇದ್ದು ಹೋರಾಟ ನಡೆಸಲಿದೆ ಎಂದರು.
ತಾಲೂಕು ವೀರ ಮಡಿವಾಳ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ‘ೈರಾಪುರ ಯಜಮಾನ್ ಸಿದ್ದರಾಜು,ಮೂಗೂರು, ತಲಕಾಡು, ಸೋಸಲೆ, ಬನ್ನೂರು ಹೋಬಳಿಯ ಯಜಮಾನರು ಪಾಲ್ಗೊಂಡಿದ್ದರು.

 

The Daily News Media

The Daily News Media