ಜಮೀರ್ ಒಬ್ಬ ಜೋಕರ್ : ಖಲೀಲ್ ವ್ಯಂಗ್ಯ

ದಿ ಡೈಲಿ ನ್ಯೂಸ್ ಕೋಲಾರ
ಕಾಂಗ್ರೆಸ್ ನಾಯಕ ಜಮೀರ್ ಅಹಮ್ಮದ್ ಖಾನ್ ಒಬ್ಬ ಜೋಕರ್‌ನಂತೆ ವರ್ತಿಸುತ್ತಲೇ ಬಂದಿದ್ದಾರೆ ಎಂದು ನಗರಸ‘ೆ ಮಾಜಿ ಉಪಾ‘್ಯಕ್ಷ ಎಲ್.ಖಲೀಲ್ ಅಹಮದ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಘಟಬಂ‘ನ್ ಕ್ಯಾಪ್ಟನ್ ಎಂದೇ ಹೆಸರಾದ ರಮೇಶ್ ಕುಮಾರ್ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ರಾಜಕೀಯ ಲಾ‘ಕ್ಕಾಗಿ ಮುಸ್ಲಿಂರನ್ನು ಬಳಸಿಕೊಂಡು ರಾಜಕಾರಣ ಮಾಡುವುದು ರಮೇಶಕುಮಾರರ ಜಾಯಮಾನ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ದೂರ ಉಳಿಯಲು ಮುಸ್ಲಿಂರು ಬಯಸಿದ್ದಾರೆ. ಆದಕಾರಣ, ಜಮೀರ್ ಅಹಮ್ಮದ್ ಕಾನ್ ಎಂಬ ಜೋಕರ್‌ನನ್ನು ಬೆಂಗಳೂರಿನಿಂದ ಕರೆಯಿಸಿ ಕಾರ್ಯಕ್ರಮ ಮಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಜಮೀರ್ ಯಾರು ಅಂತಾ ಗೊತ್ತಿರಲಿಲ್ಲ. ಇವರಿಗೆ ರಾಜಕೀಯ ಜನ್ಮ ನೀಡಿದ್ದೇ ಜೆಡಿಎಸ್. ಎಚ್.ಡಿ.ದೇವೇಗೌಡರ ಋಣದಲ್ಲಿರಬೇಕಿತ್ತು. ಆದರೆ, ಅವೆಲ್ಲವನ್ನೂ ಮರೆತು ಮನ ಬಂದಂತೆ ಜಮೀರ್ ಮಾತನಾಡುತ್ತಾರೆ. ಇವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಚಾಮರಾಜಪೇಟೆ ಬಿಟ್ಟು ರಾಜ್ಯಕ್ಕೆ ಏನಾದರೂ ಕೊಡುಗೆ ಕೊಟ್ಟಿದ್ದೀಯಾ? ಅಲ್ಪಸಂಖ್ಯಾತರನ್ನು ಗುರುತಿಸಿ ಬೆಳೆಸಿದ್ದೀಯಾ ಒಂದು ಉದಾಹರಣೆ ಕೊಡು ನೋಡೋಣ ಎಂದು ತರಾಟೆಗೆ ತೆಗೆದುಕೊಂಡ ಎಲ್.ಖಲೀಲ್ ಅಹಮದ್, ಜೆಡಿಎಸ್ ಪಕ್ಷದ ಅನ್ನ ತಿಂದು, ಅಧಿಕಾರ ಅನು‘ವಿಸಿ, ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವುದಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯ ರಕ್ಷಣೆಗಾಗಿ ಜೆಡಿಎಸ್ ಪಕ್ಷವೇ ಪರ್ಯಾಯವಾಗಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

The Daily News Media

The Daily News Media