ಅಕ್ರಮ ಮದ್ಯ: ಆರೋಪಿ ಪರಾರಿ

ದಿ ಡೈಲಿ ನ್ಯೂಸ್ ಹನೂರು
ಅಕ್ರಮವಾಗಿ ದಾಸ್ತಾನು ಮಾಡಿದ್ದ ಕಳ್ಳ‘ಟ್ಟಿ ಸಾರಾಯಿ ಹಾಗೂ ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಅಽಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಾರಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ದಿನ್ನಳ್ಳಿ ಗ್ರಾಪಂ ವ್ಯಾಪ್ತಿಯ ಮಾರಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅ‘ ಲೀ.ಕಳ್ಳ ‘ಟ್ಟಿ ಸಾರಾಯಿ ಹಾಗೂ ೧೦ಲೀ.ಬೆಲ್ಲದ ಕೊಳೆ ಮತ್ತು ೮.೬೪೦ಲೀ.ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಪತ್ತೆಗಾಗಿ ಬಲೆ ಬೀಸಿದ್ದಾರೆ.. ಕೊಳ್ಳೇಗಾಲ ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ಉಪ ನಿರೀಕ್ಷಕ ಸಿದ್ದಯ್ಯ ಅವರ ತಂಡ ರವಿನಾಯ್ಕ ಎಂಬವರ ಮನೆಮೇಲೆ ದಾಳಿನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಸುನೀಲ್ ಡಿ, ಉಪನಿರೀಕ್ಷಕ ಸಿದ್ದಯ್ಯ, ಸಿಬ್ಬಂದಿ ಪ್ರದೀಪ್, ರಮೇಶ್, ವಾಹನ ಚಾಲಕ ಮಂಜು ಪ್ರಸಾದ್ ಇದ್ದರು.

The Daily News Media

The Daily News Media