ಬಂಧೀಖಾನೆ ಸಿಬ್ಬಂದಿಗೆ ಸನ್ಮಾನ

ದಿ ಡೈಲಿ ನ್ಯೂಸ್ ವಿಜಯಪುರ
ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದಿಂದ ವಿಜಯಪುರ ಸಮೀಪದ ಕೋರಮಂಗಲ ಬಯಲು ಬಂಧೀಖಾನೆಯಲ್ಲಿ ಆಯೋಜಿಸಿದ್ದ ಮಾಸಿಕ ಕನ್ನಡ ದೀಪ ಕಾರ್ಯಕ್ರಮದಲ್ಲಿ ಬಂಧೀಖಾನೆಯ ಸೂಪರಿಡೆಂಟ್ ಮೋಹನ್ ಕುಮಾರ್, ಜೈಲರ್ ಬಸವರಾಜ್ ಚಿಕೊಪ ಅವರನ್ನು ಕಲಾವಿದರ ಸಂಘದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಕಲಾವಿದ ಕಂಟನಕುಂಟೆ ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿ, ಕಲೆಯು ಎಲ್ಲರೊಳಗೆ ಮಿಳಿತವಾಗಿರುತ್ತದೆ. ಅದಕ್ಕೆ ಸೂಕ್ತ ವೇದಿಕೆ ಅಗತ್ಯ. ಕಲಾದೇವಿ ಎಲ್ಲರನ್ನೂ ಕೈಬೀಸಿ ಕರೆಯುತ್ತಾಳೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಳು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅ‘್ಯಕ್ಷ ಚಂದ್ರಶೇಖರ ಹಡಪದ ಅವರು ಬಯಲು ಬಂಧೀಖಾನೆಯ ಬಂಧಿಗಳನ್ನುದ್ದೇಶಿಸಿ, ಮಾತನಾಡಿ, ಕೋಪದಿಂದ ಆದ ಅನಾಹುತಕ್ಕೆ ನೋವು ಮತ್ತು ವಿಷಾದವೇ ಅಂತಿಮ. ತಾವೀಗ ಪಶ್ಚಾತಾಪದಲ್ಲಿರುವಿರಿ. ಇಲ್ಲಿ ಪರಿವರ್ತಿಸುವ ಕಾರ್ಯವಾಗುತ್ತಿದೆ. ತಮ್ಮ ಈ ದಿನಗಳು ಕಲಿಕೆಯ ದಿನಗಳೆಂದು ‘ಾವಿಸಬೇಕು ಎಂದರು.
ಕಲಾವಿದರ ವಾಸುದೇವ ಸಂಘದ ಅ‘್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ವಾಸು, ಗೋವಿಂದರಾಜು, ಚಂದ್ರಶೇಖರ, ದೇವನಹಳ್ಳಿ ತಾಲೂಕು ಕಸಾಪ ಅ‘್ಯಕ್ಷ ನಂಜೇಗೌಡ ಇತರರಿದ್ದರು.

The Daily News Media

The Daily News Media