ನಿರಂತರ ಸಮಾಜಮುಖಿ ಕಾರ್ಯಗಳಿಂದ ಜನಜನಿತ

ದಿ ಡೈಲಿ ನ್ಯೂಸ್ ಚನ್ನಮ್ಮನ ಕಿತ್ತೂರು: ಕಿತ್ತೂರು ವಿ‘ಾನ ಸ‘ಾ ಕ್ಷೇತ್ರದ ಕಾಂಗ್ರೆಸ್ ಮುಖಂಡ, ಸಮಾಜ ಸೇವಕ ಹಬೀಬ್ ಶಿಲ್ಲೆದಾರ್ ಅವರ ಜನ್ಮ ದಿನವನ್ನು ಸೆ.10ರಂದು ಅರ್ಥಪೂರ್ಣವಾಗಿ ಆಚರಿಸಲು ಅವರ ಗೆಳೆಯರ ಬಳಗ ನಿ‘ರ್ರಿಸಿದೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸಂಯೋಜಕ ಪಿ.ಕೆ.ನೀರಲಕಟ್ಟಿ ಮಾತನಾಡಿ, ಹಬೀಬ್ ಬಡತನ ಮೆಟ್ಟಿ ನಿಂತು ಮೇಲೆ ಬಂದವರು. ಅವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನೋವು ಚೆನ್ನಾಗಿ ಗೊತ್ತು, ಇದರಿಂದಾಗಿ ಅವರು ಯಾವುದೇ ಲಾಪೇಕ್ಷೆ ಇಲ್ಲದೆ, ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತ ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸರ್ವ ‘ರ್ಮಗಳ ಪೂಜ್ಯರು, ಶಾಸಕ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಡಿ.ಬಿ. ಇನಾಂದಾರ, ವೀರಕುಮಾರ ಪಾಟೀಲ, ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್, ಮಹಾಂತೇಶ ಕೌಜಲಗಿ ಸೇರಿದಂತೆ ಅನೇಕ ಗಣ್ಯರು ‘ಾಗಿಯಾಗಲಿದ್ದಾರೆ. ಕ್ರಾಂತಿಕಾರಿ ‘ಾಷಣಕಾರ ನಿಕೇತರಾಜ ಮೌರ್ಯಮೌರ್ಯ ಹಾಗೂ ಗಜಲ್ ಕವಿ ಅಲ್ಲಾ ಗಿರಿರಾಜ್ ಉಪನ್ಯಾಸ ನೀಡುವರು. ನಂತರ ಖ್ಯಾತ ಜೂನಿಯರ್ ನಟರಿಂದ ಹಾಗೂ ಜೀ ಟಿವಿ ಕಾಮಿಡಿ ಕಿಲಾಡಿಗಳು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಸಾ‘ಕ ಮಹನೀಯರಿಗೆ ಸನ್ಮಾನ: ಹಬೀಬ್ ಶಿಲ್ಲೆದಾರ್ ಅವರ 49ನೇ ಜನ್ಮ ದಿನದ ಅಂಗವಾಗಿ ಶಿಕ್ಷಣ, ಕೃಷಿ, ಕ್ರೀಡೆ, ಆರೋಗ್ಯ, ಸಮಾಜ ಸೇವೆ, ಸಾಹಿತ್ಯ ಹೀಗೆ ಹತ್ತು ಹಲವು ರಂಗದಲ್ಲಿ ತನ್ನದೇ ಆದ ಸಾ‘ನೆ ಮಾಡಿದ 75 ಜನ ಮಹನೀಯರನ್ನು ಸತ್ಕರಿಸಲಾಗುವುದು. ಈವರೆಗೆ ಸತೀಶ್ ಅಣ್ಣಾ ಜಾರಕಿಹೊಳಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಂಡ ದಂಪತಿಗಳನ್ನು ಆಹ್ವಾನಿಸಿ ಗೌರವಿಸಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಪಿ.ಕೆ.ನೀರಲಕಟ್ಟಿ ತಿಳಿಸಿದರು.ಈ ಸಂದ‘ರ್ದಲ್ಲಿ ವಿಜಯಕುಮಾರ ಶಿಂ‘ೆ, ರಮೇಶ್ ಮೊಕಾಶಿ, ಅಬ್ದುಲ್ ಮುಲ್ಲಾ, ಅದೃಶ್ಯ ತುರಮರಿ, ಕುಮಾರ ಹಿರೇಮಠ, ಮಡಿವಾಳಿ ನಾಯ್ಕರ, ಶಿವು, ಸಂಗಮ ಹೊಸಮನಿ ಸೇರಿದಂತೆ ಇತರರು ಇದ್ದರು.

The Daily News Media

The Daily News Media