ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಲಾರಿಯೊಂದು ಪಾದಚಾರಿ ರಸ್ತೆಯ ಮೇಲೆ ಹರಿದಿದ್ದು , ಈ ಘಟನೆ ತಡರಾತ್ರಿ ಸಂಭವಿಸಿದ್ದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ದೊಡ್ಡ ಅನಾಹುವೊಂದು ತಪ್ಪಿದಂತಾಗಿದೆ. ನಗರದ ಸ್ಟೇಷನ್ ರಸ್ತೆಯ ಸೇಂಟ್ ಮೇರೀಸ್ ಕಾನ್ವೆಂಟ್ ಶಾಲೆಯ ಎದುರು ತಡರಾತಿ ತಮಿಳುನಾಡು ಮೂಲದ ಲಾರಿಯೊಂದು ಅಕ್ಕಿ ಮೂಟೆಗಳನ್ನು ರಾಯಚೂರಿನಿಂದ ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಾದಾಚಾರಿಗಳು ಓಡಾಡುವ ಫುಟ್ ಪಾತ್ ಮೇಲಿನ ಕಾಂಪೌಂಡ್ಗೆ ಗುದ್ದಿದ್ದು , ಲಾರಿಯ ರಭಸಕ್ಕೆ ಲಾರಿಯ ಮುಂದಿನ ಚಕ್ರಗಳು ಹಾಗೂ ಮುಂಬಾಗ ಸಂಪೂರ್ಣ ನುಜ್ಜಾಗಿದೆ. ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಈ ಘಟನೆ ರಾತ್ರಿ ಸಂಭಿವಿಸಿದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.