ಸುಮಲತಾ ಯಾವ ಪಕ್ಷಕ್ಕೂ ಸೇರಲ್ಲ

ದಿ ಡೈಲಿ ನ್ಯೂಸ್ ಮಂಡ್ಯ
ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಬಿಜೆಪಿ ಸೇರುವ ವಿಚಾರ ಶುದ್ದ ಸುಳ್ಳು ಎಂದು ಕಾಂಗ್ರೆಸ್ ಮುಖಂಡ, ಸಂಸದೆ ಸುಮಲತಾ ಅಂಬರೀಶ್ ಆಪ್ತ ದರ್ಶನ್ ಲಿಂಗರಾಜು ತಿಳಿಸಿದ್ದಾರೆ. ಸ್ವಾಭಿಮಾನಿ ಪಡೆಯಿಂದ ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳು, ಜಿಲ್ಲೆಯ ಜನರಿಂದ ಅಭೂತ ಪೂರ್ವ ಯಶಸ್ಸಿನಿಂದ ಗೆಲವು ಸಾಧಿಸಿ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೀಗಾಗಿ ಅವರು ಯಾವ ಪಕ್ಷಗಳ ಕಡೆ ಒಲವು ತೋರಿಸಿಲ್ಲ ಎಂದು ಶ್ರೀಸರಂಗಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಅವರು ಮುಂದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಕುರಿತ ಚರ್ಚೆ ಅನಾವಶ್ಯಕವಾಗಿದ್ದು, ಆ ರೀತಿಯ ಯಾವುದೇ ಮಾತುಗಳು ಬೇಡ ಎಂದು ಊಹ ಪೋಹಗಳಿಗೆ ತೆರೆ ಎಳೆದರು. ಮೈಸೂರು ಬೆಂಗಳೂರು ಹೆದ್ದಾರಿಯ ಗೌಡಹಳ್ಳಿ ಬಳಿ ಬೈಪಾಸ್ ರಸ್ತೆ ನಿರ್ಮಿಸಲು ಸಂಸದೆ ಸುಮಲತಾ ಕೇಂದ್ರ ಸಚಿವರ ಜೊತೆ ಮಾತನಾಡಿ ಜಿಲ್ಲೆಯ ಎಲ್ಲಾ ಬೈಪಾಸ್ ರಸ್ತೆಗಳ ಬಳಿಯ ಗ್ರಾಮಗಳ ಸಮಸ್ಯೆಗಳ ಚರ್ಚೆ ಮಾಡಿ ಬೈಪಾಸ್ ರಸ್ತೆ ನಿರ್ಮಿಸಲು ಕಳೆದ ಎರಡು ವರ್ಷದಿಂದ ಒತ್ತಾಯ ಮಾಡಿದ್ದಾರೆ. ಮೈಸೂರು ಸಂಸದರು ಕೂಡ ಅಧಿಕಾರಿಗಳೊಂದಿಗೆ ಈ ಸ್ಥಳಕ್ಕೆ ಬಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಡೆಯುವ ಕೆಲಸಕ್ಕೆ ಎಲ್ಲರೂ ಒತ್ತು ಕೊಟ್ಟು ಕಾಮಗಾರಿ ನಡೆದರೆ ಒಳ್ಳೆಯದು. ಎಲ್ಲರ ಬೆಂಬಲ ಬೇಕು ಎಂದರು. ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಶ್ರೀರಂಗಪಟ್ಟಣದಲ್ಲಿ ನಮ್ಮ ತಂದೆ ಎಸ್.ಎಲ್.ಲಿಂಗರಾಜು ಪ್ರಬಲ ಆಕಾಂಕ್ಷಿಯಾಗಿದ್ದಾರೆ. 2013ರಲ್ಲಿ ವಿಧಾನಸ ೆಚುನಾವಣೆಗೆ ಪಕ್ಷ ಟಿಕೆಟ್ ನೀಡಿತ್ತು. ಮುಂಬರುವ 2023ರ ವಿಧಾನಸಭೆ ಆಕಾಂಕ್ಷಿಗಳಾಗಿದ್ದಾರೆ ಎಂದರು. ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ರಘು, ಪುರಸಭೆ ಮಾಜಿ ಸದಸ್ಯ ಈ.ಕುಮಾರ್ ಪಾಪಣ್ಣಿ, ನಗುವನಹಳ್ಳಿ ಮಹದೇವಸ್ವಾಮಿ, ನೆಲಮನೆ ಯಶವಂತ್, ಬಲ್ಲೇನಹಳ್ಳಿ ರವಿ, ಚೇತನ್ ಇತರರಿದ್ದರು.

The Daily News Media

The Daily News Media