ಕೋಲಾರ: ಕರ್ನಾಟಕ ದಲಿತ ಪ್ರಜಾ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ.ಎಂ ಮುನಿರಾಜು, ಡಿ.ಪಿ.ಎಸ್ ರಾಜ್ಯಾಧ್ಯಕ್ಷ ಡಾ.ವಿ ರಾಜಕುಮಾರ್ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ.ಬಿ.ಎಂ.ಶ್ರೀನಿವಾಸ ಅವರ ನೇತೃತ್ವದಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಭೀಮ ಸಂದೇಶದೊಂದಿಗೆ ಚಲೋ ಚೈತ್ಯಭೂಮಿ ಸೈಕಲ್ ರ್ಯಾಲಿ ಹಮ್ಮಿಕೊಂಡಿದೆ.
ಕೋಲಾರದಿಂದ ದಾದರ್ಗೆ (ಬಾಬಾ ಸಾಹೇಬರ ಸಮಾಧಿ ಸ್ಥಳ) ಏ.೧೪ರಂದು ಸೈಕಲ್ ರ್ಯಾಲಿ ಕೋಲಾರದಿಂದ ಹೊರಡಲಿದೆ.
ಸೈಕಲ್ ರ್ಯಾಲಿಯಲ್ಲಿ ತೆರಳಿತ್ತಿರುವ ಸದಸ್ಯರಿಗೆ ಕರ್ನಾಟಕ ವೈಶಾಲಿ ವೇದಿಕೆ ಅಧ್ಯಕ್ಷ ಜಡಿಯಪ್ಪ, ಗಾಂಧಿನಗರ ಕಿಶನ್, ಗ್ರಾ.ಪಂ ಕಾರ್ಯದರ್ಶಿ ಆಂಜಪ್ಪ, ನಿವೃತ್ತ ಸೇನಾನಿ ಬಿ.ವಿ ಚಂದ್ರಪ್ಪ, ಕೆ.ಎಸ್.ಆರ್.ಟಿ.ಸಿ ನಿವೃತ್ತ ಅಧಿಕಾರಿ ನಾರಾಯಣಪ್ಪ, ಮುಖ್ಯೋಪಾಧ್ಯಾಯ ಆನೇಕಲ್ ಪಿ.ವೆಂಕಟೇಶ್, ಗ್ರಂಥಾಲಯ ಇಲಾಖೆಯ ನಾರಾಯಣಸ್ವಾಮಿ ಶುಭ ಕೋರಿದ್ದಾರೆ.