ದಿ ಡೈಲಿನ್ಯೂಸ್ ಮಾಲೂರು
ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ ನೋಡಿ ಬೇಸತ್ತು ಆಮ್ ಆದ್ಮಿ ಪಾರ್ಟಿ ಸೇರ್ಪಡೆಯಾಗಿದ್ದೇನೆ ಎಂದು ವಿಧಾನಸಭಾ ಕ್ಷೇತ್ರದ ಘೋಷಿತ ಅಭ್ಯರ್ಥಿ ನಾಗರಾಜ್ ಹೇಳಿದರು.
ಆಮ್ಆದ್ಮಿ ಪಾರ್ಟಿ ಮಾಲೂರು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ೧೦ ವ?ಗಳಿಂದ ತಾಲೂಕಿನ ಹಳ್ಳಿಹಳ್ಳಿ ಸುತ್ತಿರುವ ನಾನು ನಂತರದಲ್ಲಿ ಬೇಸತ್ತು ರಾಜಕೀಯ ಬಿಟ್ಟು ಬೆಂಗಳೂರು ಸೇರಿ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದೆ. ಕೇಜ್ರಿವಾಲ್ ಅವರ ದೆಹಲಿ ಅಭಿವೃದ್ಧಿ ನಂತರ ಪಂಜಾಬ್ ಗೆಲುವು ಕಂಡು ಪಕ್ಷದತ್ತ ಆಕರ್ಷಿತನಾಗಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ರವಿಶಂಕರ್, ಮಾಜಿ ಸಂಸದ ಡಾ.ವೆಂಕಟೇಶ್, ಸುರೇಶ್, ಗೋಪಾಲ್, ಸಹೇರಾ ಬಾನು, ಇವರ ಸಮ್ಮುಖದಲ್ಲಿ ಪಾರ್ಟಿ ಸೇರ್ಪಡೆಯಾಗಿದ್ದೇನೆ. ರಾಮನವಮಿ ಪ್ರಯುಕ್ತ ಸಣ್ಣ ಕಾರ್ಯಕ್ರಮದ ಮೂಲಕ ಸೇವಾಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಮಾಲೂರು ತಾಲೂಕಿನ ಜನತೆ ಅಭಿವೃದ್ಧಿ ದೆಸೆಯಿಂದ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಆಮ್ಆದ್ಮಿ ಪಾರ್ಟಿಯಿಂದ ಮಾಲೂರು ಪಟ್ಟಣದ ಅಂಬೇಡ್ಕರ್ ಉದ್ಯಾನವನದ ಮುಂಭಾಗ ಶ್ರೀರಾಮ ನವಮಿಹಬ್ಬದ ಪ್ರಯುಕ್ತ ಪಾನಕ, ಮಜ್ಜಿಗೆ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖಂಡರಾದ ಎಸ್ ಆರ್ ಶಂಕರ್, ಅಲಿ ಜೀಲಾನ್ ಖಾನ್, ಮುಬಾರಕ್, ರೇವಣ್ಣ ವೆಂಕಟಲಕ್ಷ್ಮಿ, ಹಾಗೂ ಕಾರ್ಯಕರ್ತರು ಇದ್ದರು.