ದಿ ಡೈಲಿನ್ಯೂಸ್ ಲಿಂಗಸುಗೂರು
ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಪ್ರಸಕ್ತ ಸಾಲಿನ ಹಟ್ಟಿ ಕಂಪನಿಯ ಆರ್ಥಿಕ ಉಳಿತಾಯ ಸಭೆಯು ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಪೂರ್ವದಲ್ಲಿ ದುರಸ್ತಿಯಲ್ಲಿರುವ ಹಟ್ಟಿಯ ಮುಖ್ಯರಸ್ತೆಯ ಸೇತುವೆಯನ್ನು ವೀಕ್ಷಣೆ ಮಾಡಿ ತಕ್ಷಣವೇ ಇದಕ್ಕೆ ನೀಲನಕ್ಷೆ ತಯಾರಿಸಿ, ಶಿಥಿಲಾವಸ್ಥೆಯ ರಸ್ತೆ, ಸೇತುವೆಯನ್ನು ಕೂಡಲೇ ಕಂಪನಿಯಿಂದ ಸುಮಾರು ೪.೫ ಕೋಟಿ ವೆಚ್ಚದಲ್ಲಿ ನವೀಕರಿಸಲು ಪಿಡಬ್ಲೂಡಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯವಾಗಿ ಕಂಪನಿಯು ಆರ್ಥಿಕವಾಗಿ ೧೩೦ ಕೋಟಿ ಉಳಿತಾಯ ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿದಾಯಕ ಕಾಣಬೇಕು. ಜೊತೆಗೆ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಆಹಾರ ಕಿಟ್ಗಳನ್ನು ವಿತರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದೇ ರೀತಿಯಾಗಿ ಕಾರ್ಮಿಕ ಮತ್ತು ಅವರ ಅವಲಂಬಿತರಿಗೆ ಗುಣಮಟ್ಟದ ಔಷಧೋಪಚಾರ ವಿತರಿಸಿ ಕಂಪನಿಯ ಹೆಸರನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಶ್ರಮಿಸಬೇಕೆಂದು ಕರೆ ನೀಡಿದರು.
ಕಂಪನಿಯ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಬಹದ್ದೂರ್, ರವಿಕುಮಾರ್, ಹನುಮಂತಪ್ಪ ಮತ್ತಿತರರಿದ್ದರು.