ಕರ್ತವ್ಯ ನಿರ್ವಹಿಸಿದರೆ ಗೌರವ

ದಿ ಡೈಲಿ ನ್ಯೂಸ್ ವಿರಾಜಪೇಟೆ
ಸರ್ಕಾರಿ ಸೇವೆಗೆ ನಿಯೋಜನೆಗೊಂಡ ಪ್ರತಿಯೋಬ್ಬ ಸೇವಾ ನಿರತರು ಕರ್ತವ್ಯವನ್ನು ನಿಭಾಯಿಸಿzಲ್ಲಿ ಸಮಾಜ ಗೌರವಾದರ ನೀಡುತ್ತದೆ ಎಂದು ವಿರಾಜಪೇಟೆ ತಾಲೂಕು ತಹಶೀಲ್ದಾರ್ ಆರ್ ಯೋಗನಂದ ಹೇಳಿದ್ದಾರೆ.
ವೀರಾಜಪೇಟೆ ಪೂಮಾಲೆ ಮಂದ್ ಆಡಳಿತ ಮಂಡಳಿಯಿಂದ ಆಯೋಜಿಸಲಾಗಿದ್ದ ಗ್ಯಾಲರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿzರು.
ಕಂದಾಯ ಇಲಾಖೆಯ ನಡೆ ಗ್ರಾಮದ ಕಡೆ ಎಂಬ ಕಾರ್ಯಕ್ರಮ ಈ ತಿಂಗಳ ೧೬ ನೇ ತಾರೀಕಿನಿಂದ ಆರಂಭವಾಗಲಿದೆ. ಕಂದಾಯ ಇಲಾಖೆಯ ೨೬ ಕಾರ್ಯಕ್ರಮ ಗ್ರಾಮವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದಿದ್ದಾರೆ.
ಶಾಸಕರಾದ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಂದ್‌ಗಳು ಅಭಿವೃದ್ದಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಲಭಿಸುವ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಪೂಮಾಲೆ ಮಂದ್ ಆಡಳಿತ ಮಂಡಳಿಯ ಅಧ್ಯಕ್ಷ ಅಜ್ಜನಿಕಂಡ ಸುಧೀರ್, ಮರಣ ನಿಧಿಯ ಅಧ್ಯಕ್ಷ ಚೆಂದಂಡ ಪೊನ್ನಪ್ಪ, ಉಪಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ, ತಕ್ಕರುಗಳಾದ, ಕೂಳುವಂಡ ಕಾರ್ಯಪ್ಪ, ಮುಕ್ಕಾಟೀರ ಮುತ್ತು ಉಪಸ್ಥಿತರಿದ್ದರು.

 

The Daily News Media

The Daily News Media