ಚನ್ನರಾಯಪಟ್ಟಣ: ನಗರದ ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಸಿ ಧರಣೇಶ್ ಅವರಿಗೆ ೧೮ ವಾರ್ಡ್ನ ಶ್ರೀ ವಿನಾಯಕ ಸಂಘದ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಈ ವೇಳೆ ಪಿಎಲ್ಡಿ ಬ್ಯಾಂಕ್ನ ಮಾಜಿ ಕಾರ್ಯದರ್ಶಿ ಚಂದ್ರಣ್ಣ ಮಾತನಾಡಿ, ವಿದ್ಯಾನಗರ ಸದಸ್ಯರಾದ ಧರಣೇಶ್ ಅವರು ಪುರಸಭೆಯ ಎರಡನೇ ಪ್ರಜೆಯಾಗಿ ಆಯ್ಕೆಯಾಗಿರುವುದು ನಮ್ಮ ವಾರ್ಡ್ನ ಜನತೆಗೆ ಸಂತಸ ತಂದಿದೆ. ಅವರು ವಾರ್ಡ್ನ ಅಭಿವೃದ್ಧಿಗೆ ದುಡಿದು ಮಾದರಿಯಾಗಲಿ ಎಂದು ಆಶಿಸಿದರು.
ಶ್ರೀಹರ್ಷ, ಜಯರಾಮ್, ಮಂಜುನಾಥ್, ಶಿವಕುಮಾರ್, ನಾಗರಾಜ್ ಅಂಗಡಿ, ಟೈರ್ ರವಿ, ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.