ಫಲಶ್ರುತಿ: ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ

ದಿ ಡೈಲಿ ನ್ಯೂಸ್ ಸಿರವಾರ
ಹಲವು ವರ್ಷಗಳಿಂದ ಅಭಿವೃದ್ಧಿಯಾಗದೆ ನನಗುದಿಗೆ ಬಿದ್ದಿದ್ದ ೭೩ ಕೋಟಿ ರೂ. ವೆಚ್ಚದ ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿರವಾರ-ದೇವದುರ್ಗ ಸಂಪರ್ಕ ಕಲ್ಪಿಸುವ ಸಿರವಾರ-ಅರಕೇರಾ-ದೇವದುರ್ಗ ರಸ್ತೆಯ ಶಂಕುಸ್ಥಾಪನೆಯನ್ನು ಶಾಸಕ ಕೆ.ಶಿವನಗೌಡನಾಯಕ ನೆರವೇರಿಸಿದರು.
ಈ ರಸ್ತೆ ಕುರಿತಾದ ವಿಸ್ತೃತ ವರದಿಯನ್ನು “ದಿ ಡೈಲಿ ನ್ಯೂಸ್’ ಪತ್ರಿಕೆಯು “ಕಾಮಗಾರಿಗಿಲ್ಲ ಶಂಕುಸ್ಥಾಪನೆ ಭಾಗ್ಯ’ ಎಂಬ ತಲೆ ಬರಹದ ಅಡಿಯಲ್ಲಿ ಏ.೫ ರಂದು ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ಶಾಸಕರು, ಅಧಿಕಾರಿಗಳು, ಗುತ್ತಿಗೆದಾರರು ಶಂಕುಸ್ಥಾಪನೆ ನೆರವೇರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಈ ಸಂದರ್ಭದಲ್ಲಿ ವೆಂಕೋಬ ತಾತನವರು, ವೀರಭದ್ರಯ್ಯ ಸ್ವಾಮೀಜಿ, ಜಾ.ಜಾಡಲದಿನ್ನಿ, ಜಾಡಲದಿನ್ನಿ ಅಮರೇಶಗೌಡ, ರಾಮೇಶ್ವರ ಸ್ವಾಮಿ ರೇಕಲಮರಡಿ ಉಪಸ್ಥಿತರಿದ್ದರು.

 

The Daily News Media

The Daily News Media