ಎಎಪಿಯಿಂದ ಪಾರದರ್ಶಕ ಆಡಳಿತ

ದಿ ಡೈಲಿ ನ್ಯೂಸ್ ದೇವನಹಳ್ಳಿ
ನಗರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಹಮ್ಮಿಕೊಂಡಿದ್ದ, ಕ್ಷೇತ್ರಕ್ಕೆ ಎಎಪಿ ಪಕ್ಷ ಪರಿಚಯ ಮತ್ತು ಪಾರ್ಟಿ ಸೇರ್ಪಡೆ ಕಾರ್‍ಯಕ್ರಮದ ಸುದ್ದಿಗೋಷ್ಠಿಯನ್ನು ಜೆಡಿಎಸ್ ತೊರೆದ ಮುಖಂಡ ಬಿ.ಕೆ.ಶಿವಪ್ಪ ನೇತೃತ್ವದಲ್ಲಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅವರು, ಎಎಪಿ ಪಾರ್ಟಿಯನ್ನು ಮೊಟ್ಟಮೊದಲ ಬಾರಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತರುವುದರ ಮೂಲಕ ಪಕ್ಷವನ್ನು ಗಟ್ಟಿಗೊಳಿಸಲಾಗುತ್ತದೆ. ಜನರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಸರ್ಕಾರದ ಆಡಳಿತಗಳನ್ನು ನೋಡಿದ್ದಾರೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರನ್ನು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಎಎಪಿ ಸರಕಾರ ಗೆಲುವು ಸಾಧಿಸುವುದರ ಮೂಲಕ ಅಲ್ಲಿನ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
ಹಿರಿಯ ಮುಖಂಡ ಕನ್ನಮಂಗಲ ಶ್ರೀನಿವಾಸ್ ಮಾತನಾಡಿ, ಭ್ರಷ್ಟ ಸರಕಾರಿ ಅಧಿಕಾರಿಗಳ ವಿರುದ್ಧ ನಮ್ಮ ಪಕ್ಷವು ಪ್ರತಿದಿನ ಪ್ರತಿ ಗ್ರಾಮಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಜಾಲಿಗೆ ವೆಂಕಟೇಶ್, ಗೋವಿಂದ್‌ಸ್ವಾಮಿ, ಕುಮಾರ್, ಜಯಕುಮಾರ್, ಮೋಹನ್, ಮಧು, ಅಂಬರೀಶ್, ಗಜೇಂದ್ರ, ರಾಜೇಶ್, ಮಹೇಂದ್ರ, ಆದಮ್‌ಪಾಶ, ಕಾರ್ಯಕರ್ತರು ಇದ್ದರು.

The Daily News Media

The Daily News Media