ಕೆ.ಆರ್.ನಗರ: ಜೂನ್ ತಿಂಗಳಿನಲ್ಲಿ ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಿರುವ ತಮ್ಮನ್ನು ಬೆಂಬಲಿಸಬೇಕು ಎಂದು ಅಭ್ಯರ್ಥಿ ಎನ್.ಎಸ್.ವಿನಯ್ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪದವೀಧರ ಮತದಾರರಲ್ಲಿ ಮನವಿ ಮಾಡಿದ ಅವರು, ಕಳೆದ ೨೦ ತಿಂಗಳಿನಿಂದ ನಾನು ಕ್ಷೇತ್ರ ವ್ಯಾಪ್ತಿಯ ೪ ಜಿಲ್ಲೆಗಳಿಗೆ ಭೇಟಿ ನೀಡಿದ್ದು ೪೮,೮೮೪ ಸಾವಿರ ಮತದಾರರನ್ನು ನೋಂದಣಿ ಮಾಡಿಸಿದ್ದು, ಎಲ್ಲರ ವಿಶ್ವಾಸ ಗಳಿಸುವ ನಂಬಿಕೆ ಇದೆ ಎಂದರು.
ಪ್ರವೀಣ್, ಗಿರೀಶ್, ಮಹದೇವ, ರಘು, ನಟರಾಜು, ನಾಗಣ್ಣ, ಮಂಜುನಾಥ್ ಗೌಡ, ಸೋಮಶೇಖರ್ ಮತ್ತು ಮಹದೇವಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.