ಸಿದ್ಧಾರೂಢ ಜಾತ್ರಾ ಮಹೋತ್ಸವ

ಇಂಡಿ:ಪಟ್ಟಣದ ಶ್ರೀ ಓಂಕಾರ ಆಶ್ರಮದಲ್ಲಿ ಸಿದ್ಧಾರೂಢರ ಮೂರ್ತಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಓಂಕಾರ ಆಶ್ರಮದ ಡಾ.ಸ್ವರೂಪಾನಂದ ಶ್ರೀಗಳು ತಿಳಿಸಿದರು.
ಪಟ್ಟಣದ ಸಿದ್ಧಾರೂಢ ಮಠದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಸಿದ್ಧಚೇತನ ಸೇವಾರತ್ನ ಪ್ರಶಸ್ತಿಯನ್ನು ಆದರ್ಶ ಕೃಷಿಕ ಚಿಕ್ಕರೂಗಿಯ ಸಿದ್ದಣ್ಣ ಬಿರಾದಾರ, ಆದರ್ಶ ಶಿಕ್ಷಕ ಇಂಡಿಯ ರಾಘವೇಂದ್ರ ಕುಲಕರ್ಣಿ, ಆದರ್ಶ ಸೈನಿಕ ಇಂಡಿಯ ಚಾಂದಸಾಬ ಬಾಗವಾನ, ಆದರ್ಶ ಮಹಿಳೆ ಇಂಡಿಯ ರಾಜೇಶ್ವರಿ ಜೈನ ಇವರಿಗೆ ನೀಡಲಾಗುವುದು. ಕಾರ್ಯಕ್ರಮಗಳು ಬೀದರ್‌ನ ಡಾ.ಶಿವಕುಮಾರ ಶ್ರೀಗಳು ಮತ್ತು ಡಾ.ಸ್ವರೂಪಾನಂದ ಶ್ರೀಗಳ ನೇತೃತ್ವದಲ್ಲಿ ನಡೆಯುವುದು. ಹಾಗೂ ಶಾಸಕ ಯಶವಂತಗೌಡ ಪಾಟೀಲ ಪಾಲ್ಗೊಳ್ಳುವರು.

The Daily News Media

The Daily News Media