ರಸ್ತೆಗೆ ಉಬ್ಬು ಹಾಕಿಸುವಂತೆ ಆಗ್ರಹಿಸಿ ಪ್ರತಿಭಟನೆ

ದಿ ಡೈಲಿ ನ್ಯೂಸ್ ಬೇಲೂರು
ರಸ್ತೆಗೆ ಹಂಪ್ಸ್ ಹಾಕಿಸಲು ಆಗ್ರಹಿಸಿ ತಾಲೂಕಿನ ರಾಯಪುರ ಗ್ರಾಮಸ್ಥರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮದ ಮುಖಂಡ ಶಿವಪ್ಪ ಮಾತನಾಡಿ, ಬೇಲೂರು ಪಟ್ಟಣಕ್ಕೆ ಕೇವಲ ೧ ಕಿ.ಮೀ.ದೂರದಲ್ಲಿ ಹಾಸನ ರಸ್ತೆಯಲ್ಲಿ ರಾಯಾಪುರ ಗ್ರಾಮದ ಬಳಿ ದೊಡ್ಡದಾದ ತಿರುವಿದೆ. ಕೆಲವೇ ಅಡಿಗಳ ದೂರದಲ್ಲಿರುವ ನೆಟ್ಟೇಕೆರೆ ಗ್ರಾಮದ ಗಡಿಯಿಂದ ಕೃಷ್ಣ ರೈಸ್‌ಮಿಲ್‌ವರೆಗೆ ೧೨ ಅಪಘಾತ ನಡೆದಿದೆ. ಹಲವರು ಕೈಕಾಲು ಮುರಿದುಕೊಂಡಿದ್ದಾರೆ. ಅಪಘಾತದಲ್ಲಿ ನೆಟ್ಟೇಕೆರೆ ಕುಳ್ಳಯ್ಯ ಎಂಬವರು ಮೃತಪಟ್ಟಿದ್ದಾರೆ. ಕಾರು ಅಪಘಾತದಲ್ಲಿ ನಮ್ಮ ಹುಡುಗನ ಕಾಲು ಮುರಿದಿದೆ. ಟ್ರಾಕ್ಟರ್ ಅಪಘಾತ ಆಗಿದೆ. ಶಿವಪ್ಪ ಎಂಬವರು ಗುರುವಾರ ರಾತ್ರಿ ೯ಗಂಟೆ ಸಮಯದಲ್ಲಿ ಟೀ ಕುಡಿಯಲು ಕ್ಯಾಂಟೀನ್‌ಗೆ ಹೋಗುತ್ತಿದ್ದಾಗ ಕಾರು ಗುದ್ದಿ ಸತ್ತಿದ್ದಾರೆ. ಶಾಸಕರು, ಸಂಸದರು, ಅಧಿಕಾರಿಗಳಲ್ಲಿ ರಸ್ತೆ ಉಬ್ಬು ಹಾಕಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಪಘಾತಕ್ಕೀಡಾಗಿ ಮೃತರಾದ ಶಿವಪ್ಪ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡ ರವಿ ಮಂಜು, ರವಿ, ಚಂದ್ರು, ಪಾಪಣ್ಣ, ನಾಗರಾಜ್, ಶಿವಣ್ಣ, ಮಂಜಯ್ಯ, ಮಲ್ಲೇಶ ಇತರರು ಇದ್ದರು.

 

 

 

The Daily News Media

The Daily News Media