ಅಭಿವೃದ್ಧಿಗಾಗಿ ನಮಗೆ ಆಶೀರ್ವಾದ ಮಾಡಿ

ದಿ ಡೈಲಿ ನ್ಯೂಸ್ ಗಂಗಾವತಿ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಉಪಾ‘್ಯಕ್ಷ ಶಿವರಾಮಗೌಡ ತಿಳಿಸಿದರು. ತಾಲೂಕಿನ ಕಾರ್ಯಕರ್ತರ ಸ‘ೆ ಮತ್ತು ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ‘್ರಷ್ಟಾಚಾರಕ್ಕೆ ಜನ ರೋಸಿ ಹೋಗಿದ್ದಾರೆ. ಎರಡು ನೂರು ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ ಮನೆಯ ಯಜಮಾನಿಗೆ 2000 ರೂಪಾಯಿ ನೀಡಲಾಗುತ್ತದೆ ನಿರುದ್ಯೋಗಿ ಪದವೀ‘ರರಿಗೆ ಯುವನಿಧಿ ಯೋಜನೆಯಲ್ಲಿ ಡಿಪ್ಲೊಮ 1500 ರೂಪಾಯಿ, ಪದವೀ‘ರರಿಗೆ 3000 ರೂಪಾಯಿಗಳನ್ನು ನೀಡಲಾಗುತ್ತದೆ , ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅ‘್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಸಹಿ ಮಾಡಿದ ಗ್ಯಾರೆಂಟಿ ಕಾರ್ಡ್ ಗಳನ್ನು ಮನೆಮನೆಗೆ ತಲುಪಿಸಿದ್ದೇವೆ. ಇಂಥ ಸಂದ‘ರ್ದಲ್ಲಿ ಸುಳ್ಳು ‘ರವಸೆಗಳ ನೀಡುವವರನ್ನು ತಿರಸ್ಕರಿಸಿ ಗಂಗಾವತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಮಗೆ ಆಶೀರ್ವಾದ ಮಾಡಿ ಎಂದರು. ರೈತರ ಸಾಲ ಮನ್ನಾ ಹಾಗೂ 10 ಗಂಟೆ 3 ೇಸ್ ವಿದ್ಯುತ್ ನೀಡುತ್ತೇವೆ ಎಂದು ‘ರವಸೆ ನೀಡಿದ್ದರು ಆದರೆ ಯಾವ ‘ರವಸೆಯನ್ನು ಈವರೆಗೂ ಈಡೇರಿಸಿಲ್ಲ ಆದರೆ ಮನಮೋಹನ್ ಸಿಂಗ್ ಅವರು ಪ್ರ‘ಾನಿಯಾಗಿದ್ದಾಗ ಎಲ್ಲಾ ವರ್ಗದವರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿದರು, ಉದ್ಯೋಗ ‘ರವಸೆ ಕಾಯ್ದೆ ಜಾರಿಗೆ ತಂದು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದರು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ 371 ಜೆ ಕಾಯ್ದೆ ಜಾರಿಗೆ ತಂದರು, ನಾನು ಮಂತ್ರಿಯಾಗಿದ್ದ ಮೈಬೂಬ್ ನಗರ ಮುನಿರಾಬಾದ್ ರೈಲಿಗೆ ಅನುದಾನ ಕೊಡಿಸಿದೆ, ಗಂಗಾವತಿ ನಗರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇನೆ ಈ ಸಾರಿ ಆಶೀರ್ವಾದ ಮಾಡಿದರೆ ಮತ್ತೆ ನಿಮ್ಮೆಲ್ಲರ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.

The Daily News Media

The Daily News Media