ನಾಡೋಜ ಬೆಳಗಲ್ಲ ವೀರಣ್ಣ ನಿ‘ನ

ದಿ ಡೈಲಿ ನ್ಯೂಸ್ ಬಳ್ಳಾರಿ
ತೊಗಲುಗೊಂಬೆ ಕಲಾವಿದ, ನಾಡೋಜ ಬೆಳಗಲ್ ವೀರಣ್ಣ (94) ಅವರು ರಸ್ತೆ ಅಪಘಾತದಲ್ಲಿ ‘ಾನುವಾರ ನಿ‘ನರಾಗಿದ್ದಾರೆ.
ಅವರ ಕಿರಿಯ ಪುತ್ರ ಹನುಮಂತ ಅವರೊಂದಿಗೆ ಚಿಕ್ಕಮಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಚಿತ್ರದುರ್ಗ ಜಿಲ್ಲೆಯ ತಳಕು ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಹಿರೇಹಳ್ಳಿ ಬಳಿ ಬೆಳಿಗ್ಗೆ ಕಾರು ಪಲ್ಟಿಯಾಗಿ ಬೆಳಗಲ್ಲು ವೀರಣ್ಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ಹನುಮಂತ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ವ್ಯಾಪ್ತಿಯ ಠಾಣೆ ಅಧಿಕಾರಿಗಳು, ಸಿಬ್ಬಂದಿ ತೆರಳಿ ಪರಿಶೀಲಿಸಿದರು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸ್ಥಳಕ್ಕೆ ತೆರಳಿದರು. ತೊಗಲು ಗೊಂಬೆ ಕಲಾವಿದರಾಗಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದ್ದರು. ರಂಗ‘ೂಮಿ ಕ್ಷೇತ್ರದಲ್ಲೂ ರಾಜ್ಯ ಸೇರಿದಂತೆ ದೇಶ, ವಿದೇಶಗಳಲ್ಲೂ ಹೆಸರು ಮಾಡಿದ್ದರು. ಇವರ ಈ ಅತ್ಯುತ್ತಮ ಸಾ‘ನೆಯಿಂದ ನಾಡೋಜ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳಿಗೆ ‘ಾಜನರಾಗಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅ‘್ಯಕ್ಷರಾಗಿದ್ದರು. ಬೆಳಗಲ್ಲು ವೀರಣ್ಣ ಅವರು, 8ನೇ ವಯಸ್ಸಿನಲ್ಲೇ ರಂಗ‘ೂಮಿ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಗುಬ್ಬಿ ವೀರಣ್ಣ ಕಂಪನಿ ಸೇರಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಜಿಲ್ಲೆಯ, ನಾಡಿನ ಕೀರ್ತಿ ಹೆಚ್ಚಿಸಿದ್ದರು. ಅವರ ಈ ಅಕಾಲಿಕ ನಿ‘ನದಿಂದ ರಂಗ‘ೂಮಿಗೆ ‘ರಿಸಲಾರದ ನಷ್ಟವನ್ನುಂಟು ಮಾಡಿದೆ.

The Daily News Media

The Daily News Media