ಆರೋಪದ ತನಿಖೆಗೆ ಸಿದ್ಧ: ಸಿಎಂ

ದಿ ಡೈಲಿ ನ್ಯೂಸ್ ಉತ್ತರ ಕನ್ನಡ (ಸಿದ್ಧಾಪುರ)
ಅಬಕಾರಿ ಟೆಂಡರ್‌ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ವಿವರಗಳನ್ನು ನೀಡಲಿ. ಯಾವುದೇ ತನಿಖೆಗೆ ನಾವು ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ತಿಳಿಸಿದರು.
ವಿವಿ‘ ಯೋಜನೆಗಳಡಿ ಸೌಲ‘್ಯ ವಿತರಿಸಿ ಮಾತನಾಡಿದ ಅವರು, ಅಬಕಾರಿ ಟೆಂಡರ್‌ನಲ್ಲಿ ಹಗರಣವಾಗಿದೆ ಎಂದುಯಾವುದೇ ವಿವರಗಳನ್ನು ನೀಡದೇ ಕಾಂಗ್ರೆಸ್ ಆರೋಪ ಮಾಡಿದರೆ ಪ್ರಯೋಜನವಿಲ್ಲ ಎಂದರು.
ಲೋಕಾಯುಕ್ತಕ್ಕೆ ದೂರು ನೀಡಲಿ: ಶಾಸಕ ಪ್ರಿಯಾಂಕ ಖರ್ಗೆ ಬಗ್ಗೆಯೇ ಸಾಕಷ್ಟು ಆರೋಪಗಳಿವೆ ಪಿಎಸ್‌ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ, ವಿವರಗಳನ್ನು ನೀಡಲಿ. ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಎಂದರು. ವೇತನ ಪರಿಷ್ಕರಣೆ ಇತ್ಯರ್ಥ: ವೇತನ ಆಯೋಗ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು. ಸರ್ಕಾರಿ ನೌಕರರು ನಮ್ಮವರು. ಅವರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮ‘್ಯಂತರ ವರದಿಯನ್ನು ಪಡೆದು ಶಿಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಬೇಡಿಕೆ ಇದೆ. ಆಯೋಗದ ಸಂಪರ್ಕದಲ್ಲಿ ರಾಜ್ಯ ಸರ್ಕಾರವಿದ್ದು, ಕೂಡಲೇ ಮ‘್ಯಂತರ ವರದಿ ನೀಡಲು ಕೋರಲಾಗಿದೆ ಎಂದರು.

The Daily News Media

The Daily News Media