ಶಾಸಕರ ದುರಾಡಳಿತ: ಆರೋಪ

ಕೋಲಾರ: ಕಾಂಗ್ರೆಸ್ ಶಾಸಕರ ದುರಾಡಳಿತಕ್ಕೆ ಬೇಸತ್ತಿರುವ ಬಂಗಾರಪೇಟೆ ಕ್ಷೇತ್ರದ ಜನತೆ ಈ ಬಾರಿ ಬಿ.ಜೆ.ಪಿ.ಯ ಕಡೆ ಮುಖ ಮಾಡಿದ್ದು , ಬಿ.ಜೆ.ಪಿ ಅ‘್ಯರ್ಥಿ ಗೆಲ್ಲುವುದು ಖಚಿತ ಎಂದು ಜಿ.ಪಂ.ಮಾಜಿ.ಸದಸ್ಯ ವಿ.ಮಹೇಶ್ ಹೇಳಿದರು. ಬಂಗಾರಪೇಟೆ ವಿ‘ಾನ ಸ‘ಾ ಕ್ಷೇತ್ರದ ವಡಗೂರು ಪಂಚಾಯತಿ ವ್ಯಾಪ್ತಿಯ ಹಲವಾರು ಹಳ್ಳಿಗಳಲ್ಲಿ ಸೋಮವಾರ ಮನೆ ಮನೆಗೆ ಕ್ಷೇತ್ರದ ಮುಖಂಡರೊಂದಿಗೆ ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಿ.ಜೆ.ಪಿ.ಯ ಸಾ‘ನೆಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದರೊಂದಿಗೆ ಒಗ್ಗಟ್ಟಿನ ಪ್ರದರ್ಶನ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಜೆಡಿಎಸ್ ನಾಯಕರು ಚುನಾವಣೆ ಹಿನ್ನೆಲೆಯಲ್ಲಿ ಈಗ ಸಂಚರಿಸುತ್ತಿದ್ದಾರೆ. ಹೀಗಾಗಿ, ಜನರು ಅವರನ್ನು ನಂಬುತ್ತಿಲ್ಲ ಎಂದು ದೂರಿದರು. ಮಾಜಿ ಶಾಸಕರಾದ ಪಿ.ಮುನಿವೆಂಕಟಪ್ಪ ಹಾಗೂ ಎಂ.ನಾರಾಯಣಸ್ವಾಮಿ ಮಾತನಾಡಿ, ಬಂಗಾರಪೇಟೆ ಶಾಸಕರ ದುರಾಡಳಿತ ಹಾಗೂ ದೌರ್ಜನ್ಯಕ್ಕೆ ಮಿತಿ ಇಲ್ಲವಾಗಿದೆ ಎಂದು ಆರೋಪಿಸಿದರು. ಮುಖಂಡರಾದ ಶೇಷು, ಚಂದ್ರಾರೆಡ್ಡಿ, ತಂಬಳ್ಳಿ ಮುನಿಯಪ್ಪ, ಮಂಡಲ್ ಅ‘್ಯಕ್ಷ ನಾಗೇಶ್, ರಾಜೇಂದ್ರ, ನಾರಾಯಣ ಗೌಡ,
ವಿಟಪನಹಳ್ಳಿ ವೆಂಕಟೇಶ್,ಅಮರೇಶ್ ಇತರರಿದ್ದರು.
ೆಟೋ: ಕೋಲಾರ ಶಾಸಕ

The Daily News Media

The Daily News Media