ಉರುಳಿಗೆ ಬಿದ್ದು ನಾಯಂಗಚ್ಚಿಕಟ್ಟೆ ಫೀಮೇಲ್ ಹುಲಿ ಸಾವು

ತಬ್ಬಲಿ ಮರಿಗಳ ಪತ್ತೆಗೆ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ
ದಿ ಡೈಲಿ ನ್ಯೂಸ್ ಮೈಸೂರು: ಬೇಟೆಗಾರರ ಉರುಳಿಗೆ ಸಿಲುಕಿ ಸಾವನ್ನಪಿದ್ದ ಹೆಣ್ಣು ಹುಲಿಯ ಮೂರು ಮರಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಾಕಾನೆ ನೆರವಿನ ಮೂಲಕ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯಕ್ಕೆ ಸೇರಿದ ತಾರಕ ಗ್ರಾಮದ ಜಮೀನೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು ೧೨-೧೩ ವರ್ಷದ ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದೆ. ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವಿಗೀಡಾಗಿದೆ. ಈ ಹುಲಿಗೆ ಸುಮಾರು ೬ ರಿಂದ ೮ ತಿಂಗಳ ಮೂರು ಮರಿಗಳಿದ್ದವು. ತಾಯಿ ಉರುಳಿಗೆ ಸಿಲುಕಿದ ಸಂದ‘ದಲ್ಲಿ ಈ ಮರಿಗಳು ಅಲ್ಲಿಂದ ನಾಪತ್ತೆಯಾಗಿವೆ. ಈ ಹೆಣ್ಣು ಹುಲಿ ಕಾಕನಕೋಟೆಯ ಸರಿಯ ಪ್ರಮುಖ ಆಕರ್ಷಣೆಯಾಗಿತ್ತು. ಇದಕ್ಕೆ ಪ್ರವಾಸಿಗರು ಹಾಗೂ ವನ್ಯಜೀವಿ ಛಾಯಾಗ್ರಾಹಕರು ನಾಯಂಗಚ್ಚಿಕಟ್ಟೆ ಫೀಮೇಲ್ ಎಂದು ಹೆಸರಿಟ್ಟಿದ್ದರು. ಸರಿಯ ವೇಳೆ ನಾಯಂಗಚ್ಚಿಕಟ್ಟೆಯ ಕೆರೆಯ ಬಳಿ ತನ್ನ ಮರಿಗಳೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ೪ ಬಾರಿ ಮರಿಗಳಿಗೆ ಜನ್ಮ ನೀಡಿದ್ದ ಈ ಹುಲಿ ಇಲ್ಲಿಯವರೆಗೆ ಒಟ್ಟು ೧೨ ಮರಿಗಳನ್ನು ಹೆತ್ತಿದೆ. ಆಹಾರ ಅರಸಿ ತಾರಕ ಹಿನ್ನೀರಿನ ಪ್ರದೇಶಕ್ಕೆ ತನ್ನ ಮರಿಗಳ ಜತೆ ಬಂದಾಗ ಕಳ್ಳ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ. ಕಳ್ಳ ಬೇಟೆಗಾರರು ಕಾಡು ಹಂದಿಗೆ ಉರುಳು ಹಾಕಿzರಾ ಅಥವಾ ಹುಲಿಯ ಬೇಟೆಗಾಗಿಯೇ ಹಾಕಿzರಾ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಕೂಂಬಿಂಗ್ ಕಾರ್ಯಾಚರಣೆ: ತಾಯಿಯನ್ನು ಕಳೆದುಕೊಂಡ ೩ ಮರಿಗಳ ವಯಸ್ಸು ಸುಮಾರು ೬ ರಿಂದ ೮ ತಿಂಗಳು ಎಂದು ಅಂದಾಜಿಸಲಾಗಿದೆ. ಆದ್ದರಿಂದ ಇವು ಕಾಡಿನಲ್ಲಿ ಸ್ವತಃ ‘ಟೆಯಾಡಿ ಬದುಕುವುದು ಕಷ್ಟ. ದಶಕಗಳಿಂದಲೂ ತಾಯಿ ಹುಲಿಗಳು ಆಹಾರ ಅರಸಿ ಸಾವಿಗೀಡಾದ ಸಂದ‘ದಲ್ಲಿ ಹುಲಿ ಮರಿಗಳು ಆಹಾರವಿಲ್ಲದೆ ಸಾವಿಗೀಡಾದ ಕಹಿ ಘಟನೆಗಳು ನಡೆದಿದೆ. ಆಹಾರ ಸಿಗದೆ ಸಾಯುವ ಸಾ‘ತೆಯಿರುವುದರಿಂದ ಸಾಕಾನೆಗಳಾದ ಅಭಿಮನ್ಯು, ಅಶ್ವತ್ಥಾಮ ಹಾಗೂ ಭೀಮ ಆನೆಗಳ ಮೂಲಕ ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಹುಲಿ ಮರಿಗಳ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಅವುಗಳಿಗೆ ಅರವಳಿಕೆ ಮದ್ದು ನೀಡಿ, ಸೆರೆ ಹಿಡಿದು ಸಾಕುವ ಯೋಜನೆ ಅರಣ್ಯ ಇಲಾಖೆಯದ್ದಾಗಿದೆ.
ಏತನ್ಮ‘ ಉರುಳು ಹಾಕಿರುವ ಕಳ್ಳ ಬೇಟೆಗಾರರ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದ್ದು, ಬೇಟೆಗಾರರು ಎಲ್ಲಿಯೇ ಅಡಗಿದ್ದರೂ ಬಿಡುವುದಿಲ್ಲ. ಪತ್ತೆ ಹಚ್ಚಿ ತಕ್ಕ ಶಾಸ್ತಿ ಮಾಡಿಸುತ್ತೇವೆ ಎಂದು ವಲಯ ಅರಣ್ಯಾಽಕಾರಿ ಸಿದ್ದರಾಜು ತಿಳಿಸಿದರು.

The Daily News Media

The Daily News Media