ಅಣ್ಣಮ್ಮದೇವಿ ಜಾತ್ರಾ ಮಹೋತ್ಸವ

ದಿ ಡೈಲಿ ನ್ಯೂಸ್ ಪೀಣ್ಯ ದಾಸರಹಳ್ಳಿ
ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡ್‌ನ ಅನ್ನಪೂರ್ಣೇಶ್ವರಿ ನಗರದ ಬ್ರಹ್ಮಕಮಲ ಅಸೋಸಿಯೇಷನ್ ಸಂಸ್ಥೆಯ ಪದಾಽಕಾರಿಗಳ ನೇತೃತ್ವದಲ್ಲಿ ನಾಡದೇವತೆ ಅಣ್ಣಮ್ಮ ದೇವಿ, ಸರ್ಕಲ್ ಮಾರಮ್ಮ ದೇವಿ, ಚೌಡೇಶ್ವರಿ ತಾಯಿಯ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ವಿವಿ‘ ಪೂಜಾ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಕಂದಾಯ ಸಚಿವ ಆರ್.ಅಶೋಕ್ ಮತ್ತು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎಸ್.ಮುನಿರಾಜು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವ ಆರ್. ಅಶೋಕ್, ಕ್ಷೇತ್ರ ಅಭಿವೃದ್ಧಿ ಮತ್ತು ಜನರ ಕಷ್ಟಸುಖ ಸ್ಪಂದಿಸುವ ಕೆಲಸ ಆಗಬೇಕಾದರೆ ಕ್ಷೇತ್ರದ ಶಾಸಕರು ಮತ್ತು ರಾಜ್ಯ ಸರ್ಕಾರ ಒಂದೇ ಪಕ್ಷಕ್ಕೆ ಸೇರಿರಬೇಕು. ಆಗ ಮಾತ್ರ ಜನರಿಗೆ ಸೌಕರ್ಯಗಳನ್ನು ಒದಗಿಸುವುದು ಸಾ‘. ಅದಕ್ಕಾಗಿ ೨೦೨೩ರಲ್ಲಿ ವಿ‘ನಸ‘ ಚುನಾವಣೆಯಲ್ಲಿ ಮಾಜಿ ಶಾಸಕ ಎಸ್. ಮುನಿರಾಜು ಅವರನ್ನು ಗೆಲ್ಲಿಸಿರಿ ಎಂದು ಹೇಳಿದರು.
ಮಾಜಿ ಶಾಸಕ ಎಸ್ ಮುನಿರಾಜು ಮಾತನಾಡಿ, ತಮ್ಮ ಅವಽಯಲ್ಲಿ ಅನ್ನಪೂರ್ಣೇಶ್ವರಿನಗರ, ಐಪಿನಗರ, ‘ರೇಶ್ವರ ನಗರ ಹೀಗೆ ಅನೇಕ ನಗರದಲ್ಲಿ ರಸ್ತೆ, ಒಳಚರಂಡಿ, ಬೀದಿ ದೀಪ. ಕುಡಿವ ನೀರು ಸೌಕರ್ಯ ಒದಗಿಸಿದ್ದೇನೆ ಎಂದರು. ಮಾಜಿ ಪಾಲಿಕೆ ಸದಸ್ಯ ಎಚ್.ಎನ್. ಗಂಗಾ‘ರ್, ಸಚಿವ ಆರ್. ಅಶೋಕ್, ಮಾಜಿ ಶಾಸಕ ಎಸ್. ಮುನಿರಾಜು, ಕ್ಷೇತ್ರದ ಬಿಜೆಪಿ ಅ‘ಕ್ಷ ಎನ್. ಲೋಕೇಶ್ ಸೇರಿದಂತೆ ಹಲವಾರು ಮುಖಂಡರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಬಿಜೆಪಿ ಹಿರಿಯ ಮುಖಂಡ ರಾಮಸ್ವಾಮಿ, ನಾಗೇಶ್ ಶೆಟ್ಟರ್, ಮುಖಂಡ ಹರೀಶ್, ಡಿ.ಕೆ.ಮಹೇಶ್, ಡಾ. ನಾಗೇಶ್, ಸಪ್ತಗಿರಿ ಆನಂದ್, ಬಸವರಾಜು, ಅಶೋಕ್ ಕಾಳಚಾರ್, ಯುವ ಮುಖಂಡರಾದ ಶ್ರೀನಿವಾಸ್, ನಟರಾಜ್, ಲೀಜನ್, ಲಕ್ಷ್ಮಣ್ಣಪ್ಪ ಇನ್ನತರರಿದ್ದರು.

The Daily News Media

The Daily News Media