ದಿ ಡೈಲಿ ನ್ಯೂಸ್ ತಿಪಟೂರು
ತಂದೆ ತಾಯಿಯ ಆಶಯದಂತೆ ವೈದ್ಯಕೀಯ ಕಲಿತು ವೈದ್ಯನಾದೆ. ಬಡರೋಗಿಗಳ ಸೇವೆಯಲ್ಲಿ ಬದುಕಿನ ಸಂತೃಪ್ತಿ ಕಂಡೆ ಎಂದು ಖ್ಯಾತ ವೈದ್ಯ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀ‘ರ್ ಹೇಳಿದರು.
ನಗರದ ಕೌಸ್ತು‘ ಹೋಟೆಲಿನಲ್ಲಿ ಕಲಾಕೃತಿ ತಂಡ ಮತ್ತು ಜೇಮ್ಸ್ ಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಸಮಾರಂ‘ದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಮ್ಮದು ವೈದ್ಯ ಕುಟುಂಬ. ಶ್ರೀಮಂತಿಕೆ ಇತ್ತು. ಆದರೂ, ನಾನು ಬಡವನೆಂದೇ ‘ವಿಸಿ ಬಡವರ ಕಷ್ಟಗಳನ್ನು ತಿಳಿದುಕೊಳ್ಳುತ್ತಿದೆ. ತಂದೆ-ತಾಯಿಯೂ ಸಹ ಬಡವರ ಸೇವೆಯಲ್ಲೇ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಇದು ನನಗೆ ಸೂರ್ತಿ ನೀಡಿತ್ತು ಎಂದು ತಮ್ಮ ಮನದಾಳದ ವೃತ್ತಿಪರ ತೃಪ್ತಿಯನ್ನು ಹಂಚಿಕೊಂಡರು.
ನನ್ನ ತಾತ ತಿಪಟೂರಿನಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಬೇಡ. ದೊಡ್ಡ ನಗರಗಳಲ್ಲಿ ಆರಂಭಿಸ. ನನ್ನಲ್ಲಿಗೆ ಬಾ ಎಂದು ಕರೆದರು. ನನ್ನ ತಾಯಿ ನನ್ನ ಕಡೆ ಉಸಿರಿರುವರೆಗೂ ತಿಪಟೂರಿನಲ್ಲಿಯೇ ಸೇವೆ ಮಾಡು ಎಂದರು. ತಾಯಿಯ ಆಶಯದಂತೆ ಇಲ್ಲಿಯೇ ಉಳಿದು ದೀನ, ದಲಿತರು, ಬಡವರು, ನಿರ್ಗತಿಕರ ಸೇವೆ ಮಾಡಿದ ತೃಪ್ತಿ ಇದೆ ಎಂದರು.
ಜಿಲ್ಲಾಡಳಿತ ನನ್ನ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದ್ದು, ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಬಡ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದಾಗ ಅವರು ಕೊಡುವ ಹಣಕ್ಕಿಂತ ನಗುತ್ತಾ ಕೈಮುಗಿಯುವಾಗ ತಂದೆ ತಾಯಿ ನೆನಪಾಗುತ್ತದೆ. ಕೊರೊನಾ ಮಹಾಮಾರಿಯಿಂದ ಆತ್ಮೀಯ ಹಿತೈಷಿಗಳನ್ನು ಕಣ್ಮುಂದೆ ಕಳೆದುಕೊಂಡಾಗ ಒಬ್ಬನೇ ನೆನೆದು ದುಃಖಿಸುತ್ತಿದ್ದೆ ಎಂದು ‘ವುಕರಾದರು.
ಕಲಾಕೃತಿ ತಂಡದ ಪ್ರ‘ನ ಕಾರ್ಯದರ್ಶಿ ಜ್ಯೋತಿ ಗಣೇಶ್, ಕಾರ್ಯದರ್ಶಿ ತಿಪಟೂರು ಕೃಷ್ಣ, ನಗರಸ‘ ಉಪಾ‘ಕ್ಷ ಸೊಪ್ಪು ಗಣೇಶ್, ಪ್ರ‘ ವಿಶ್ವನಾಥ್, ಮಾರನಗೆರೆ ನಿರಂಜನ ಮೂರ್ತಿ, ಜೇಮ್ಸ್ ಂಡೇಶನ್ ಅ‘ಕ್ಷ ತರಕಾರಿ ಗಂಗಾ‘ರ್, ನಗರಸ‘ ಸದಸ್ಯೆ ಡಾ, ಒಹಿಲಾ ಗಂಗಾ‘ರ್ ಸೇರಿದಂತೆ ಇತರರಿದ್ದರು.
ಟೋ: ತಿಪಟೂರು ಕೌಸ್ತು‘