ವಾಹನ ಚಾಲಕರಿಗೆ ಅರಿವು

ದಿ ಡೈಲಿ ನ್ಯೂಸ್ ಮುದಗಲ್
ಸ್ಥಳೀಯ ಆಟೋ ಚಾಲಕರಿಗೆ ಚಾಲನೆ ಪರವಾನಗಿ, ವಿಮೆ, ಸರ್ಕಾರದ ನಿಯಮ ಸೇರಿ ವಾಹನ ಚಾಲನೆ ಕುರಿತು ಪೊಲೀಸರಿಂದ ಗುರುವಾರ ಅರಿವು ಮೂಡಿಸಲಾಯಿತು.
ಸಂಚಾರಿ ನಿಯಮ ಪಾಲಿಸುವುದರ ಜತೆಗೆ ಕುಡಿದು ವಾಹನ ಚಲಾಯಿಸುವುದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ರೀತಿ ದಂಡ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಮುನ್ನೆಚ್ಚೆರಿಕೆಯಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತ ಚಾಲನೆ ಮಾಡುವಂತೆ ಪೊಲೀಸ್‌ರು ಆಟೋ ಚಾಲಕರಿಗೆ ಮಾಹಿತಿ ನೀಡಿದರು.
ಅಲ್ಲದೇ, ಕುಡಿದು ವಾಹನ ಚಲಾಯಿಸುವುದಿಲ್ಲ, ಚಾಲನೆ ಪರವಾನಗಿ, ವಿಮೆ ಮತ್ತು ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ವಾಹನ ಚಾಲಕರಿಗೆ ಪ್ರತಿಜ್ಞಾವಿಽ ಬೋಽಸಲಾಯಿತು. ಪಿಎಸೈ ಛತ್ರಪ್ಪ, ಎಸೈ ವೆಂಕಟಪ್ಪ ನಾಯಕ ಹಾಗೂ ಆಟೋ ಚಾಲಕರು ಹಾಜರಿದ್ದರು.

The Daily News Media

The Daily News Media