ಕರ್ನಾಟಕದ ಅಸ್ಮಿತೆ ರಕ್ಷಣೆಗೆ ಹೋರಾಡೋಣ

ಪುರುಷೋತ್ತಮ ಬಿಳಿಮಲೆ, ಜೆಎನ್‌ಯು ನಿವೃತ್ತ ಪ್ರಾ‘ಪಕ
ಹೊಯ್ಸಳರು ಮತ್ತು ಸೇವುಣರ ನಡುವಣ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ‘ಗವಾದದ್ದು ೧೩ನೇ ಶತಮಾನದಲ್ಲಿ. ವಸಾಹತು ಕಾಲಘಟ್ಟದಲ್ಲಿ ಕರ್ನಾಟಕವು ಮುಂಬಯಿ, ಮದ್ರಾಸ್, ಹೈದರಾಬಾದ್‌ಗಳ ನಡುವೆ ಹಂಚಿಹೋಯಿತು. ಕೊಡಗು ಬ್ರಿಟಿಷರ ಅಽನ ರಾಜ್ಯವಾಗಿ ಉಳಿಯಿತು. ಕೆಲವು ಪ್ರದೇಶಗಳು ಮರಾಠಿ ಸಂಸ್ಥಾನಿಕರ ವಶದಲ್ಲಿ ಉಳಿದವು. ಕರ್ನಾಟಕವು ಆಡಳಿತಾತ್ಮಕವಾಗಿ ಒಂದಾದದ್ದು ೭೫೦ ವರ್ಷಗಳ ಆನಂತg, ೧೯೫೬ರಲ್ಲಿ. ೨೦ನೇ ಶತಮಾನದ ಆರಂ‘ದ ಹೊತ್ತಿಗೆ ಕರ್ನಾಟಕವು ಕನಿಷ್ಠ ೨೦ ಕಡೆ ಹಂಚಿಹೋಗಿತ್ತು. ಕನ್ನಡ ‘ಷಿಕರೇ ಪ್ರ‘ನವಾಗಿರುವ ಜನರದೂ ಒಂದು ಪ್ರತ್ಯೇಕ ಪ್ರಾಂತ್ಯವಿರಬೇಕೆಂಬ ‘ವನೆ ಕರ್ನಾಟಕದಲ್ಲಿ ಬೆಳೆಯಿತು. ನವೋದಯ ಕಾಲಘಟ್ಟದಲ್ಲಿ ಕಾಣಿಸಿಕೊಂಡ ಹೊಸಬಗೆಯ ಬೌದ್ಧಿಕತೆಯು ರಾಷ್ಟ್ರೀಯತೆಯನ್ನೂ ಕರ್ನಾಟಕತ್ವವನ್ನೂ ಸಂಘರ್ಷವಿಲ್ಲದ ರೀತಿಯಲ್ಲಿ ಬೆಳೆಸಿತು. ಕುವೆಂಪು ಅವರು ಜೈ ‘ರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೇ ಎಂದು ಬರೆದು ಹೋರಾಟವನ್ನು ಸಂಘರ್ಷಾತೀತಗೊಳಿಸಿದರು. ಆ ಕಾಲದಲ್ಲಿ ಕರ್ನಾಟಕದ ಇತಿಹಾಸದ ಬಗ್ಗೆ ಪ್ರಕಟವಾದ ಪುಸ್ತಕಗಳು ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟವು. ೧೯೦೩ರ ಬೆನಗಲ್ ರಾಮರಾಯರು ಕರ್ನಾಟಕ ಏಕೀಕರಣದ ಕಲ್ಪನೆಯನ್ನು ಮುಂದಿಟ್ಟು ‘ರವಾಡದಲ್ಲಿ ‘ಷಣ ಮಾಡಿದರು. ಆಲೂರ ವೆಂಕಟರಾಯರು ೧೯೦೭ರಲ್ಲಿ ವಾಗ್ಭೂಷಣ ಪತ್ರಿಕೆಯಲ್ಲಿ ಏಕೀಕರಣವನ್ನು ಒತ್ತಾಯಿಸಿ ಲೇಖನವನ್ನು ಪ್ರಕಟಿಸಿದರು. ೧೯೧೫ರಲ್ಲಿ ಸಾಹಿತ್ಯ ಪರಿಷತ್ತು ನಿರ್ಮಾಣವಾಯಿತು. ೧೯೨೪ರಲ್ಲಿ ಬೆಳಗಾವಿ ಕಾಂಗ್ರೆಸ್ಸಿನ ಕಾಲಕ್ಕೇ ಸರ್ ಸಿದ್ದಪ್ಪ ಕಂಬಳಿಯವರ ಅ‘ಕ್ಷತೆಯಲ್ಲಿ ಪ್ರಥಮ ಕರ್ನಾಟಕ ಏಕೀಕರಣ ಸಮ್ಮೇಳನವೂ ಜರುಗಿತು. ಹಿಂದೂಸ್ಥಾನೀ ಸೇವಾದಳವು ೧೯೨೬ರಲ್ಲಿ ಸಹಿ ಸಂಗ್ರಹ ಚಳವಳಿ ಮಾಡಿ, ಏಕೀಕರಣದ ಪರ ೩೬,೦೦೦ ಜನರ ಸಹಿ ಪಡೆಯಿತು. ನೆಹರೂ ಕಮಿಟಿಯು ೧೯೨೮ರಲ್ಲಿ ಏಕೀಕರಣವನ್ನು ಬಲವಾಗಿ ಬೆಂಬಲಿಸಿತು. ಆದರೆ ಕರ್ನಾಟಕವನ್ನು ಒಂದುಗೂಡಿಸುವುದು ಸುಲ‘ದ ಕೆಲಸವಾಗಿರಲಿಲ್ಲ. ೧೯೪೬ರ ಕೊನೆಗೆ ಬ್ರಿಟಿಷರು ‘ರತವನ್ನು ಬಿಡುವ ಸಂಗತಿ ಖಚಿತವಾಗುತ್ತಿದ್ದಂತೆಯೇ ಮುಂಬೈ ಹಾಗೂ ಮದ್ರಾಸ್ ವಿ‘ನಸ‘ಗಳು ೧೯೪೭ರಲ್ಲಿ ಕರ್ನಾಟಕ ಏಕೀಕರಣವನ್ನು ಬೆಂಬಲಿಸಿ ಠರಾವು ಮಂಡಿಸಿದವು. ಅದೇ ವರ್ಷ ಕರ್ನಾಟಕ ಏಕೀಕರಣ ಮಹಾಸಮಿತಿಯನ್ನು ಸ್ಥಾಪಿಸಲಾಯಿತು. ಇದರ ಮೊದಲ ಅ‘ಕ್ಷರು ಎಸ್. ನಿಜಲಿಂಗಪ್ಪನವರು, ಕಾರ್ಯದರ್ಶಿಗಳು ಅಂದಾನಪ್ಪ ದೊಡ್ಡಮೇಟಿ ಹಾಗೂ ಮಂಗಳವೇಡೆ ಶ್ರೀನಿವಾಸರಾಯರು. ೧೯೪೭ರ ಡಿಸೆಂಬರಿನಲ್ಲಿ ಕಾಸರಗೋಡಿನಲ್ಲಿ ಡಾ. ದಿವಾಕರರ ಅ‘ಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನವು ದೇಶ ಸ್ವತಂತ್ರವಾದರೂ ರಾಜ್ಯ ಏಕೀಕರಣ ಆಗದ ಬಗ್ಗೆ ತೀವ್ರ ಅಸಮಾ‘ನ ಸೂಚಿಸಿತು. ( ಮುಂದೆ ಇದೇ ಕಾಸರಗೋಡು ಕರ್ನಾಟಕದ ‘ಗವಾಗದೇ ಹೋಯಿತು) ೨೦ ಆಡಳಿತಗಳಿಗೆ ಸೇರಿದ್ದ ಕರ್ನಾಟಕವು ಮುಂಬೈ, ಮದ್ರಾಸ್, ಮೈಸೂರು, ಹೈದರಾಬಾದ್ ಹಾಗೂ ಕೊಡಗು ಹೀಗೆ ಐದು ಆಡಳಿತಕ್ಕೆ ಮಾತ್ರ ಒಳಪಟ್ಟಿತು. ಇದು ಏಕೀಕರಣದ ನಿಟ್ಟಿನಲ್ಲಿ ಇಡಲಾದ ಮೊದಲ ಮತ್ತು ಮಹತ್ವದ ಹೆಜ್ಜೆ. ಮೈಸೂರು ಸಂಸ್ಥಾನ ವಿಶಾಲ ಕನ್ನಡ ಪ್ರದೇಶವಾಗಿದ್ದು ಅದರ ಜೊತೆ ಉಳಿದ ಪ್ರದೇಶಗಳು ಐಕ್ಯವಾದಲ್ಲಿ ಏಕೀಕರಣ ಸುಲ‘ವೆಂದು ಹೋರಾಟಗಾರರು ‘ವಿಸಿದರು. ಪೊಟ್ಟಿ ಶ್ರೀ ರಾಮುಲು ಉಪವಾಸ ನಡೆಸಿ ತೀರಿಕೊಂಡಾಗ ಆಂ‘ ಪ್ರಾಂತ್ಯ ರಚನೆಯಾಗಿ ಬಳ್ಳಾರಿ ಜಿಯ ಏಳು ತಾಲೂಕು ಮೈಸೂರಿಗೆ ಸೇರಿತು. ಕೊನೆಗೆ ಜಲ್ ಅಲಿ ಅ‘ಕ್ಷತೆಯಲ್ಲಿ ರಾಜ್ಯ ಪುನರ್ಘಟನಾ ಆಯೋಗ ನೇಮಕಗೊಂಡು, ಏಕೀಕೃತ ಕರ್ನಾಟಕವು ೧೯೫೬ರ ನವೆಂಬರ್ ೧ಕ್ಕೆ ಅಸ್ತಿತ್ವಕ್ಕೆ ಬಂತು. ಹಾಗಾಗಿ ಇವತ್ತು ನಾವು ಆಚರಿಸುತ್ತಿರುವುದು ಕರ್ನಾಟಕ ರಾಜ್ಯ ಹುಟ್ಟಿದ ದಿವಸ. ಈ ರಾಜ್ಯದಲ್ಲಿ ಕನ್ನಡವೇ ಮುಖ್ಯ ‘ಷೆ. ಉಳಿದ ೭೦ಕ್ಕೂ ಹೆಚ್ಚು ‘ಷೆಗಳು ಕರ್ನಾಟಕದ ಸೊತ್ತು ಎಂಬುದನ್ನು ಮರೆಯಬಾರದು. ಕರ್ನಾಟಕದ ಅಸ್ಮಿತೆಯನ್ನು ನಾಶ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧವೂ ನಾವೆಲ್ಲ ಒಟ್ಟು ಸೇರಿ ಕೆಲಸ ಮಾಡಬೇಕಾಗಿದೆ.

The Daily News Media

The Daily News Media