ಆರೋಗ್ಯ ಕ್ಷೇತ್ರದಲ್ಲಿ ಜಾಲಪ್ಪ ಸೇವೆ

ದಿ ಡೈಲಿ ನ್ಯೂಸ್ ಕೋಲಾರ
ಅವಿ‘ಜಿತ ಜಿಲ್ಲೆಯ ಬಡಜನರ ಆರೋಗ್ಯ ಕಾಪಾಡುವಲ್ಲಿ ದಿ.ಆರ್.ಎಲ್.ಜಾಲಪ್ಪ ಅವರ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ದೇವರಾಜ ಅರಸು ವೈದ್ಯಕೀಯ ಕಾಲೇಜು ಸ‘ಂಗಣದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೊಡ್ಡಬಳ್ಳಾಪುರ ಜಿಲ್ಲೆಯವರಾದ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಈ ‘ಗದ ಬಡಜನರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲೆಂದು ಉತ್ತಮ ದರ್ಜೆಯ ಆಸ್ಪತ್ರೆ ನಿರ್ಮಿಸಲು ಹಲವಾರು ಕಷ್ಟಕಾರ್ಪಣ್ಯಗಳನ್ನು ಕಂಡರು. ದೂರದ ಬೆಂಗಳೂರಿಗೆ ಹೋಗದೆ ಹೆಚ್ಚಿನ ಹಣ ಖರ್ಚಾಗದಂತೆ ಉತ್ತಮ ವೈದ್ಯಕೀಯ ವ್ಯವಸ್ಥೆ ಇರುವ ಆಸ್ಪತ್ರೆಯನ್ನು ಕೊನೆಗೂ ನಿರ್ಮಿಸಿ ಬಡಜನರ ಆರೋಗ್ಯ ಕಾಪಾಡುತ್ತಿದ್ದಾರೆ ಎಂದು ನುಡಿದರು. ಇಲ್ಲಿನ ರೈತಮಕ್ಕಳು ಸಹ ವೈದ್ಯರಾಗಬೇಕೆಂದು ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಮಕ್ಕಳು ಜಾಲಪ್ಪನವರ ವೈದ್ಯಕೀಯ ಸಂಸ್ಥೆಯಲ್ಲಿ ಓದಿ ಹಲವರು ಹೊರದೇಶಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ ಎಂದರು.
ವೈದ್ಯಕೀಯ ಸಂಸ್ಥೆಯ ಆಡಳಿತ ಮಂಡಳಿ, ವೈದ್ಯಾಽಕಾರಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.

 

The Daily News Media

The Daily News Media