ಕಳಪೆ ಕೆಲಸ,ಕ್ರಿಮಿನಲ್ ಕೇಸ್‌ಗೆ ಆಗ್ರಹ

ದಿ ಡೈಲಿ ನ್ಯೂಸ್ ಲಿಂಗಸುಗೂರು
ತಾಲೂಕಿನ ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ವಿತರಣಾ ಕಾಲುವೆಗಳ ಆ‘ನೀಕರಣ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಮಾಡಿದ ಗುತ್ತಿಗೆದಾರರು ಹಾಗೂ ಇದರಲ್ಲಿ ಶಾಮೀಲಾಗಿರುವ ಅಽಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಽಕಾರಿಗಳು ಆಗ್ರಹಿಸಿದರು. ತಹಸೀಲ್ದಾರ್ ಶಾಲಂಸಾಬರ ಅವರಿಗೆ ಮನವಿ ಸಲ್ಲಿಸಿ, ತಾಲೂಕಿನ ಲಕ್ಷಾಂತರ ಹೆಕ್ಟೇರ್ ‘ಪ್ರದೇಶಕ್ಕೆ ನೀರುಣಿಸುವ ಕಾಲುವೆಗಳ ಆ‘ನೀಕರಣ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆಯಾಗಿದೆ ಎನ್ನುವುದಕ್ಕೆ ಅಲ್ಲಲ್ಲಿ ಕೊಚ್ಚಿ ಹೋಗಿರುವುದೇ ಸಾಕ್ಷಿಯಾಗಿದೆ. ಬಹುತೇಕ ಕಡೆಗಳಲ್ಲಿ ಕಾಲುವೆಯಲ್ಲಿ ಹೂಳು ತುಂಬಿ, ಮಾಡಿದ ಕೆಲಸದ ಕಾಂಕ್ರೀಟ್ ಕಿತ್ತಿ ಹೋಗಿದೆ. ಕೆಲಸ ಕಳಪೆಯಾಗಿ ನಡೆಯುತ್ತಿದ್ದರೂ, ಕಂಡೂ ಕಾಣದಂತೆ ಇದ್ದ ಕೆಬಿಜೆಎನ್‌ಎಲ ಅಽಕಾರಿಗಳು ಇದರಲ್ಲಿ ಶಾಮೀಲಾಗಿzರೆ. ಕೂಡಲೇ ತನಿಖೆ ನಡೆಸಿ ಕಳಪೆ ಕೆಲಸ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇದಕ್ಕೆ ಸಾಥ್ ನೀಡಿದ ಅಽಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದರು. ಸಂಘಟನೆ ರಾಜ್ಯ ಸಮಿತಿ ಸದಸ್ಯ ಪ್ರ‘ಲಿಂಗ ಮೇಗಳಮನಿ, ಸಾಮಾಜಿಕ ಜಾಲ ತಾಣದ ಮುಖ್ಯಸ್ಥ ಅಕ್ರಂಪಾಷ, ಮುಖಂಡರಾದ ಎಲ್ಲಪ್ಪ ಹಾಲಬಾವಿ, ಬಸವರಾಜ್, ಮಾಳಪ್ಪಗೌಡ, ಕಾಶಿಮಸಾಬ್, ಹುಸೇನಪ್ಪ ಹನುಮಪ್ಪ, ದುರುಗಪ್ಪ, ಶರಣಪ್ಪ ಸೇರಿ ಇತರರಿದ್ದರು.

The Daily News Media

The Daily News Media