ಪೋಸ್ಟರ್ ಪರಸ್ಪರ ಟ್

ಬಿಜೆಪಿಯಿಂದ ಹಗರಣಗಳ ಸರದಾರ ಸ್ಕ್ಯಾಮ್ ರಾಮಯ್ಯಪುಸ್ತಕ ಬಿಡುಗಡೆ ಮೂಲಕ ಕಾಂಗ್ರೆಸ್‌ಗೆ ಎದಿರೇಟು
ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇಸಿಎಂ ಬಿತ್ತಿಪತ್ರ ಬಿಡುಗಡೆ ಮಾಡಿದ್ದ ಬೆನ್ನೆಲ್ಲೆ ರಾಜ್ಯಬಿಜೆಪಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಽಸಿದಂತೆ ೨೮ ಪುಟಗಳ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದೆ. ಜಾಣಕುರುಡುತನ, ಜಾಣ ಕಿವುಡುತನ, ಹಗರಣಗಳ ಸರದಾರ ಸಿದ್ದರಾಮಯ್ಯ ಎಂಬ ಈ ಪುಸ್ತಕದಲ್ಲಿ ಅವರ ಆಡಳಿತದಲ್ಲಿ ನಡೆದಿರುವ ‘ಷ್ಟಾಚಾರಗಳನ್ನು ಬಿಜೆಪಿ ಜನರ ಮುಂದಿಟ್ಟಿದೆ. ಪುಸ್ತಕ ಬಿಡುಗಡೆಗೊಳಿಸಿದ ಕಟೀಲ್: ಬಿಜೆಪಿ ರಾಜ್ಯಾ‘ಕ್ಷ ನಳಿನ್‌ಕುಮಾರ್ ಕಟೀಲ್, ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನಡೆದಿರುವ ಹಗರಣಗಳ ಸ್ಕ್ಯಾಮ್ ಪುಸ್ತಕವನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಅರ್ಕಾವತಿ ಬಡಾವಣೆಯ ರೀಡೂ, ಅರ್ಜಿ ಹಾಕದೆ ಇದ್ದವರಿಗೂ ನೌಕರಿ, ಕಾಮಗಾರಿ ಇಲ್ಲದೆ ಬಿಲ್ ಪಾವತಿ, ಸಿದ್ದು ಆಪ್ತನ ಮಗ ಮರಳು ಲೂಟಿ, ಅಹಿಂದ ವರ್ಗಕ್ಕೆ ಮಾಡಿದ ಮಹಾಮೋಸ, ಕೊಳಗೇರಿ ಮಂಡಳಿಯಲ್ಲಿ ೨೫೦೦ ಕೋಟಿ ಲೂಟಿ, ಕಸ ಲೇವಾರಿಯಲ್ಲಿ ಹಗರಣ, , ಪಡಿತರ ಅಕ್ಕಿ ಗೋಽ ಖರೀದಿಯಲ್ಲಿ ೨೦೦೦ ಕೋಟಿ ‘ಷ್ಟಾಚಾರ ಮತ್ತಿತರ ಆರೋಪ ವಿವರಗಳು ಪುಸ್ತಕದಲ್ಲಿವೆ .
ದಾಖಲೆ ಸಹಿತ ಮಾಹಿತಿ: ಹಾಸಿಗೆ ದಿಂಬು ಖರೀದಿಯಲ್ಲೂ ಲೂಟಿ, ಮೊಟ್ಟೆ ಖರೀದಿಯಲ್ಲಿ ಕೋಟಿ ಲೂಟಿ, ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಖರೀದಿಯಲ್ಲೂ ಅಕ್ರಮ, ವಿದ್ಯುತ್ ಖರೀದಿ, ಬೋರ್‌ವೇಲ್ ಹಗರಣ ಹೀಗೆ ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿರುವ ‘ಷ್ಟಾಚಾರಗಳನ್ನು ದಾಖಲೆ ಸಮೇತ ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಈ ಎಲ್ಲಾ ಹಗರಣಗಳಿಗೆ ಸಂಬಂಽಸಿದಂತೆ ನಮ್ಮ ಸರ್ಕಾರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಕಟೀಲ್ ತಿಳಿಸಿದ್ದಾರೆ.

The Daily News Media

The Daily News Media