ಕೆ.ಆರ್.ನಗರ: ತಾಲೂಕಿನ ‘ರ್ಯ ಸಮೀಪದ ಸಂಬ್ರವಳ್ಳಿ ಗ್ರಾಮದಲ್ಲಿ ದಂಪತಿ ಸಾಲಕ್ಕೆ ಹೆದರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಬೆಟ್ಟಪ್ಪ(೫೦) ರುಕ್ಮಿಣಿ(೪೩) ಮೃತಪಟ್ಟವರು. ಮದುವೆಯಾಗಿ ೩೦ ವರ್ಷವಾಗಿದ್ದು, ಇಬ್ಬರೂ ಗ್ರಾಮದ ಜಮೀರ್ ಅಹ್ಮದ್ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳ ಮದುವೆ ಮಾಡಿ, ಹೊಸ ಮನೆ ಕಟ್ಟಿದ್ದರು.ಇದಕ್ಕಾಗಿ ಸಾಲ ಮಾಡಿದ್ದರು. ವಾರಕ್ಕೊಮ್ಮೆ ಸಾಲದ ಕಂತು ಕಟ್ಟಲಾಗದೆ ಹೆದರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಮೂಲಕ ಶವಗಳನ್ನು ಹೊರತೆಗೆಯಲಾಗಿದೆ.