ದಿ ಡೈಲಿ ನ್ಯೂಸ್ ಚಿತ್ತಾಪುರ
ಮುಂಬರುವ ವಿ‘ಾನಸ‘ಾ ಚುನಾವಣೆಯಲ್ಲಿ ಚಿತ್ತಾಪುರ ಮತ ಕ್ಷೇತ್ರದಿಂದ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಜಿಪಂ ಮಾಜಿ ಸದಸ್ಯ, ಜಿಲ್ಲಾ ಬಿಜೆಪಿ ಉಪಾ‘್ಯಕ್ಷ ಬಸವರಾಜ ಬೆಣ್ಣೂರಕರ್ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿ‘ಾನಸ‘ೆ ಚುನಾವಣೆಯಲ್ಲಿ ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅ‘್ಯರ್ಥಿಗಳು ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬೆಳೆಯಲು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಹಾಗೂ ಸ್ಥಳೀಯರ ಶ್ರಮ ಹೆಚ್ಚಿದೆ ಎಂದರು.
ಚಿತ್ತಾಪುರ ಮೀಸಲಾತಿ ಮತಕ್ಷೇತ್ರದಲ್ಲಿ ಪಕ್ಷ ಕಟ್ಟಲು ಕೆಳ ಹಂತದಿಂದ ದುಡಿದ ಅನೇಕ ಕಾರ್ಯಕರ್ತರು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಗ್ಯವಾದ ಅ‘್ಯರ್ಥಿಗಳು ಚಿತ್ತಾಪುರ ಮತಕ್ಷೇತ್ರದಲ್ಲಿಯೇ ಇದ್ದಾರೆ. ಬೇರೆ ಕ್ಷೇತ್ರದ ಅ‘್ಯರ್ಥಿಗಳು ಚಿತ್ತಾಪುರ ಮತಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ಮೇಲ್ಮೋಟಕ್ಕೆ ಕಂಡು ಬರುತ್ತಿದೆ. ಹಾಗಾಗಿ ಸ್ಥಳೀಯರಾದ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಟಿಕೆಟ್ ಆಕಾಂಕ್ಷಿಗಳಾದ ವಿಠಲ್ ನಾಯಕ್, ಅಯ್ಯಪ್ಪ ರಾಮತೀರ್ಥ, ಗಿರೀಶ ‘ಜಂತ್ರಿ, ಗೋಪಾಲ ರಾಠೋಡ, ಪೋಮು ರಾಠೋಡ, ರಾಮದಾಸ ಚವ್ಹಾಣ, ವಾಲ್ಮೀಕಿ ರಾಠೋಡ ಮಾತನಾಡಿದರು.
ಪ್ರಮುಖರಾದ ವೀರಣ್ಣ ಯಾರಿ, ಸುರೇಶ ಬೆನಕನಹಳ್ಳಿ, ಮಹೇಶ ಬಟಗೇರಿ, ಹನುಮಾನ ವ್ಯಾಸ್, ‘ರತಜೀ ಇನ್ನಿತರರಿದ್ದರು.