ಶಾಸಕ ಸ್ಥಾನಕ್ಕಾಗಿ ಹರಕೆ

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ತಾತಪ್ಪಯ್ಯಾ ಜಾತ್ರೆಯಲ್ಲಿ, ಕೆ.ಬೆಳಗಲ್ ಗ್ರಾಮದ ಎರ್ರೀಸಿದ್ದೇಶ್ವರ ಜಾತ್ರೆ ಹಾಗೂ ತಾಲೂಕಿನ ವಿವಿಧ ಜಾತ್ರೆಗಳಲ್ಲಿ ಬಿಜೆಪಿ ತಾಲೂಕು ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪ ಅವರ ಪುತ್ರ ಸಿದ್ದಪ್ಪನವರು ಶಾಸಕರಾಗಿ ಆಯ್ಕೆಯಾಗಬೇಕೆಂದು ಅಭಿಮಾನಿಗಳು ಹೂವಣ್ಣಿನ ಮೇಲೆ ಮುಂದಿನ ಶಾಸಕರು ಸಿದ್ದಪ್ಪನವರು ಎಂದು ಬರೆದು ರಥೋತ್ಸವಕ್ಕೆ ಎಸೆದು ಹರಕೆಯನ್ನು ಹೊತ್ತಿದ್ದಾರೆ.
ಈ ಕುರಿತು ಎಂ.ಎಸ್.ಸಿದ್ದಪ್ಪನವರು ಪ್ರತಿಕ್ರಿಯಿಸಿ, ಸಿರುಗುಪ್ಪ ಕ್ಷೇತ್ರದ ಜನತೆ ನನ್ನ ಮೇಲಿನ ಪ್ರೀತಿ, ಗೌರವದಿಂದ ಹರಕೆ ಹೊತ್ತಿದ್ದಾರೆ. ಜನರ ಬೆಂಬಲವಿದೆ. ಭಗವಂತ ಕೃಪಾಶಿರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ಸಿರುಗುಪ್ಪದ ಶಾಸಕನಾಗಿ ಆಯ್ಕೆಯಾಗಲಿದ್ದೇನೆ ಎಂದರು.

 

 

The Daily News Media

The Daily News Media