ಮಂಡ್ಯ: ಜಿಲ್ಲಾದ್ಯಂತ ಬುಧವಾರ ಸುರಿದ ಗಾಳಿ ಸಮೇತ ಭಾರೀ ಮಳೆ ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜಿಲ್ಲೆಯ ಜನತೆಗೆ ತಂಪನೆರೆಯಿತು.
ಯುಗಾದಿ ಹಬ್ಬದ ನಂತರ ವರ್ಷದ ಮೊದಲ ಮಳೆ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಮಿಂಚು, ಗುಡುಗು ಸಹಿತ ಮಳೆ ಗಂಟೆಗೂ ಅಧಿಕ ಕಾಲ ಸುರಿಯತೊಡಗಿತು.
ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣ, ವಿ.ವಿ ರಸ್ತೆ, ಕಲಾಮಂದಿರ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಮಳೆಯಿಂದ ಜಲಾವೃತಗೊಂಡವು.