ಭಕ್ತರಿಗೆ ಸ್ಪಂದಿಸಿದ ಸಿದ್ಧಾರೂಢರು

 ದಿ ಡೈಲಿ ನ್ಯೂಸ್ ಬೀದರ್
ಭಕ್ತರ ಕಷ್ಟ ಪರಿಹರಿಸಿದವರು, ಇಷ್ಟಾರ್ಥ ನೆರವೇರಿಸಿದವರು ಸದ್ಗುರು ಸಿದ್ಧಾರೂಢ ಮಹಾಸ್ವಾಮಿಗಳು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಬಣ್ಣಿಸಿದರು.
ಭಾಲ್ಕಿ ತಾಲೂಕಿನ ಚಳಕಾಪುರದಲ್ಲಿ ಸಿದ್ಧಾರೂಢ ಮಹಾಸ್ವಾಮಿಗಳ ಜಯಂತಿ ನಿಮಿತ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿ, ಪವಾಡ ಪುರುಷರಾಗಿದ್ದ ಸದ್ಗುರುಗಳು ಭಕ್ತರ ಮನಸ್ಸಿನಲ್ಲಿ ಇದ್ದಿದ್ದನ್ನು ತಿಳಿದುಕೊಳ್ಳುತ್ತಿದ್ದರು. ಭಕ್ತಿಯಿಂದ ನಡೆದುಕೊಂಡವರ ಇಷ್ಟಾರ್ಥಗಳು ತಾನಾಗಿ ಪೂರ್ಣಗೊಳ್ಳುತ್ತಿದ್ದವು. ಅದು ಸದ್ಗುರುಗಳ ಮಹಿಮೆಯಾಗಿತ್ತು ಎಂದು ಹೇಳಿದರು.
ಪೂಜ್ಯರ ಮಾರ್ಗದರ್ಶನದಲ್ಲಿ ಬೀದರಿನಲ್ಲಿ ಶಾಲಾ ಕಾಲೇಜು ನಡೆಯುತ್ತಿವೆ. ಆಯುರ್ವೇದಿಕ ಕಾಲೇಜು ನಾಡಿನಲ್ಲಿಯೇ ಹೆಸರಾಗಿದೆ. ಕರ್ನಾಟಕದ ಜೊತೆಗೆ ತೆಲಂಗಾಣ, ಮಹಾರಾಷ್ಟ್ರಗಳಲ್ಲೂ ಅಪಾರ ಭಕ್ತರನ್ನು ಹೊಂದಿದ್ದಾರೆ ಎಂದು ಸೂರ್ಯಕಾಂತ್ ಹೇಳಿದರು.
ಶಿವಕುಮಾರ ಮಹಾಸ್ವಾಮಿಗಳು, ಕೇಂದ್ರ ಸಚಿವ ಭಗವಂತ ಖೂಬಾ, ಮಠಾಧೀಶರು, ಗಣ್ಯರು, ಬೀದರ್ ನಗರಸಭೆ ಸದಸ್ಯ ಶಶಿ ಹೊಸಳ್ಳಿ, ವಿರುಪಾಕ್ಷ ಗಾದಗಿ ಮತ್ತಿತರರು ಉಪಸ್ಥಿತರಿದ್ದರು.

 

The Daily News Media

The Daily News Media