ಬೆಂಗಳೂರು: ನೆರೆ ರಾಜ್ಯಗಳು ಕರ್ನಾಟಕದಲ್ಲಿನ ದುರಾಡಳಿತ ಕಂಡು ನಗುತ್ತಿವೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಉಲ್ಲೇಖಿಸಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಟ್ವೀಟ್ ಮಾಡಿದ್ದಾರೆ.
ಬೊಮ್ಮಾಯಿಯವರೇ, ನೆರೆ ರಾಜ್ಯಗಳು ನಿಮ್ಮ ದುರಾಡಳಿತ ಕಂಡು ನಗುತ್ತಿವೆ. ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವ ಕೋಮುಗಲಭೆಯಿಂದ ಉದ್ಯಮಿಗಳು ಜಾಗ ಖಾಲಿ ಮಾಡುತ್ತಿದ್ದಾರೆ, ಇದರಿಂದ ರಾಜ್ಯದ ಯುವಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ದೂರಿದ್ದಾರೆ.