ಆಧುನಿಕತೆಯ ಅಬ್ಬರಕ್ಕೆ ನಶಿಸುತ್ತಿದೆ ಜಾನಪದ

ದಿ ಡೈಲಿನ್ಯೂಸ್ ಶಹಾಬಾದ
ಆಧುನಿಕತೆ ನಾಗಾಲೋಟಕ್ಕೆ ಜನಮಾನಸದಿಂದ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಅದರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ರಾಜ್ಯ ಯುವಪ್ರಶಸ್ತಿ ಪುರಸ್ಕೃತ ಬಸವರಾಜ ತೋಟದ್ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಮರತೂರ ಗ್ರಾಮದಲ್ಲಿ ಪ್ರಬುದ್ಧ ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಲಾದ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕ ಜಾನಪದ ಪರಿ?ತ್ತಿನ ಜಿಲ್ಲಾಘಟಕ ನಗರದ ಆಜಾದ್ ಪಾರ್ಕ್ ಗಣಪತಿ ಪೆಂಡಾಲಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜಾನಪದದ ಅಗತ್ಯ ಮತ್ತು ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ಅರಿವಿಲ್ಲ. ಹೀಗಾಗಿ ಅವರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಜಾನಪದದ ಮಹತ್ವವನ್ನು ಅವರಿಗೆ ಮನದಟ್ಟಾಗುವಂತೆ ತಿಳಿಸಿದಲ್ಲಿ ಮತ್ತೆ ದೇಶಿಯ ಸಂಸ್ಕೃತಿಯತ್ತ ಮರಳುತ್ತಾರೆ ಎಂದರು.
ಈ ಹಿಂದೆ ಗ್ರಾಮೀಣ ಭಾಗದ ಯುವಕರು ಮೊದಲು ದನಕರುಗಳು ಮೇಯಿಸಲು ಹೋದಾಗ ಜಾನಪದ ಹಾಡುಗಳು ಹಾಡುತ್ತ ದನಕರುಗಳನ್ನು ಕೂಡ ಮಗ್ನವಾಗಿಸುತ್ತಿದ್ದರು. ಈಗ ಅವರ ಕೈಗಳಲ್ಲಿ ಮೊಬೈಲ್ ಹಾಡು ಕೆಳುವುದರಿಂದ ಮನಸ್ಸಿನ ನೆಮ್ಮದಿಯೂ ಹಾಳಾಗುತ್ತಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮಲ್ಲಪ್ಪ ಎಸ್.ದೊಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ನಿರಂತರವಾಗಿ ಜಾನಪದ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಜಾನಪದ ಗಾಯನ ರಾಣಮ್ಮ ಪ್ಯಾರಸಾಬಾದ, ಸೊಬಾನ ಪದ ಮಹಾದೇವಿ ಬುಟ್ನಾಳ, ತತ್ವ ಪದ ಮಲ್ಲಯ್ಯ ಸ್ವಾಮಿ ಮತ್ತು ಸಂಗಡಿಗರು, ಹಂತಿಪದ ಶಿವಾನಂದ ಪುಜಾರಿ ಹಾಗೂ ಸಂಗಡಿಗರು, ಲಾವಣಿಪದ ಮಲ್ಲಪ್ಪ ಡಿ. ಹಾಡಿದರು.
ಮಲ್ಲಯ್ಯ ಸ್ವಾಮಿ, ಮಹೇಶ ದೇವಣಿ, ಶಿವಾನಂದ ಮುರಗನವರ, ರಂಗನಾಥ ಉದಯಕರ್, ಪ್ರಮೋದ.ಎಮ್, ನಾಗವೇಣಿ ಮತ್ತಿತರರು ಇದ್ದರು.

 

 

The Daily News Media

The Daily News Media