ಹಡಪದ ಅಪ್ಪಣ್ಣ ಗವಿ ಅಭಿವೃದ್ಧಿಗೆ ಒತ್ತಾಯ

ದಿ ಡೈಲಿ ನ್ಯೂಸ್ ಬೀದರ್
ಬಸವಕಲ್ಯಾಣದಲ್ಲಿ ಬಸವಣ್ಣ ಅವರ ಅರಿವಿನ ಮನೆ ಬಳಿಯಿರುವ ಹಡಪದ ಅಪ್ಪಣ್ಣ ಶರಣರ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರಿಸಿ, ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘ ಒತ್ತಾಯಿಸಿದೆ.
ಮಹಾತ್ಮ ಹಡಪದ ಅಪ್ಪಣ್ಣ ಶರಣರು ಬಸವಣ್ಣನವರ ಆಪ್ತರಾಗಿ ಮಹಾಮನೆ ಹಾಗೂ ಅನುಭವ ಮಂಟಪದ ಕಾರ್ಯದರ್ಶಿಯಾಗಿ ಆರಂಭದಿಂದ ಕೊನೆವರೆಗೂ ಬಸವಣ್ಣನವರ ಜೊತೆಯಲ್ಲಿದ್ದರು. ಆದರೆ ಬಸವಕಲ್ಯಾಣ ಪರಿಸರದಲ್ಲಿರುವ ಶರಣ ಸ್ಮಾರಕಗಳನ್ನು ಅಭಿವೃದ್ದಿಪಡಿಸಲು ರಚಿಸಲಾಗಿರುವ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಡಪದ ಅಪ್ಪಣ್ಣನವರ ಗವಿ ಸೇರಿಸಲಾಗಿಲ್ಲ ಎಂದು ಎಂದು ಪ್ರಭುರಾವ್ ತರನಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಏ.೯ ರಂದು ಬಸವಕಲ್ಯಾಣಕ್ಕೆ ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಂಘದ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಎಚ್.ಪ್ರಭುರಾವ್ ತರನಳ್ಳಿ, ಕೋಶಾಧ್ಯಕ್ಷ ಶರಣಪ್ಪ ಚಂದನಹಳ್ಳಿ ಮತ್ತಿತರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

 

 

The Daily News Media

The Daily News Media