ದಿ ಡೈಲಿ ನ್ಯೂಸ್ ಹುಣಸೂರು
ಧರ್ಮಗಳಿಗೆ ಒಳಪಡುವ ಧರ್ಮಗ್ರಂಥಗಳು ಆಯಾ ಧರ್ಮೀಯರಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ಭಾರತದ ಸಂವಿಧಾನವು ವಿಭಿನ್ನವಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಡಾ.ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿಗಳ ಅಂಗವಾಗಿ ಹುಣಸೂರು ತಾಲೂಕು ಆಡಳಿತ ಆಯೋಜಿಸಿದ್ದ ನವರಾತ್ರಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲ ಜಾತಿ ಧರ್ಮಗಳನ್ನು ಮೀರಿ ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣ, ಸ್ವತಂತ್ರ, ಪ್ರೀತಿ ಗೌರವಗಳಿಂದ ಬದುಕುವ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದರು.
ದಲಿತ ಮುಖಂಡರಾದ ಹರಿಹರಾನಂದಸ್ವಾಮಿ, ಬಸವಲಿಂಗಯ್ಯ, ನಿಂಗರಾಜ್ ಮಲ್ಲಾಡಿ, ನಾಗರಾಜ್ ಮಲ್ಲಾಡಿ, ದೇವರಾಜ ಒಡೆಯರ್, ಶಿವಕುಮಾರ್, ಬಲ್ಲೇನಹಳ್ಳಿ ಕೆಂಪರಾಜು, ವಕೀಲರಾದ ಪುಟ್ಟರಾಜು, ಕುರುಬ ಸಂಘದ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ತಹಸೀಲ್ದಾರ್ ಡಾ.ಅಶೋಕ್, ಇಓ ಗಿರೀಶ್, ಸಮಾಜ ಕಲ್ಯಾಣಾಧಿಕಾರಿ ಮೋಹನ್ಕುಮಾರ್ ಪಾಲ್ಗೊಂಡಿದ್ದರು.