ಠಾಣೆ ಮೆಟ್ಟಿಲೇರಿದ ಪ್ರೇಮಿಗಳಿಗೆ ವಿವಾಹ

ದಿ ಡೈಲಿನ್ಯೂಸ್ ಕೋಲಾರ
ನರಸಾಪುರ ಹೋಬಳಿಯ ಸೊನ್ನೇನಹಳ್ಳಿ ಗ್ರಾಮದ ಭವಾನಿ ಎಂಬ ಹುಡುಗಿ ಮತ್ತು ಶ್ರೀನಿವಾಸಪುರ ತಾಲೂಕು ಚೊಕ್ಕರೆಡ್ಡಿ ಹಳ್ಳಿ ಗ್ರಾಮದ ಗಂಗರಾಜು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಗಂಗರಾಜು ಮನೆಮಂದಿ ವಿರೋಧ ವ್ಯಕ್ತಪಡಿಸಿದಾಗ ಗಂಗರಾಜು ತನ್ನ ಮನೆಯವರನ್ನು ಒಪ್ಪಿಸಿ ವಿವಾಹವಾಗುವವರೆಗೆ ಕಾಯುವಂತೆ ಹುಡುಗಿಗೆ ಹೇಳುತ್ತಿದ್ದಾಗ ಇದಕ್ಕೆ ಭವಾನಿ ಹಾಗೂ ಮನೆಯವರು ಒಪ್ಪದೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಯಿತು.
ಈ ವಿಷಯ ತಿಳಿದ ದಲಿತ ಸಮನ್ವಯ ಸಮಿತಿ ಪದಾಧಿಕಾರಿಗಳ ಕಲ್ಕೆರೆ ವಿಜಯಕುಮಾರ್ ಹಾಗೂ ಅವರ ತಂಡ ಪೊಲೀಸ್ ಠಾಣೆಗೆ ಧಾವಿಸಿ ಯುವಕ-ಯುವತಿಯನ್ನು ಮತ್ತು ಇಬ್ಬರ ತಂದೆ-ತಾಯಿಗಳನ್ನು ಕರೆಸಿ ಅವರ ಮನವೊಲಿಸಿ ವೇಮಗಲ್ ಗ್ರಾಮದ ಗಣೇಶ ದೇಗುಲದಲ್ಲಿ ವಿವಾಹ ಮಾಡಿಸಲಾಯಿತು.
ಈ ವೇಳೆ ಗಂಗರಾಜು ಅವರ ತಂದೆ ಗೋವಿಂದಪ್ಪ, ಭವಾನಿ ತಂದೆ-ತಾಯಿ ಪ್ರಮೀಳಮ್ಮ ಮುನಿಯಪ್ಪ ಹಾಗೂ ದಲಿತ ಮುಖಂಡರಾದ ಬೆಳ್ಳಳ್ಳಿ ವೇಣು, ಕರವೇ ಸಂಘಟನೆಯ ವೇಮಗಲ್ ನಾಗರಾಜು ಇದ್ದರು.

 

 

 

 

 

The Daily News Media

The Daily News Media