ದಿ ಡೈಲಿ ನ್ಯೂಸ್ ಬಂಗಾರಪೇಟೆ
ತಾಲೂಕು ಕಸಬಾ ಹೋಬಳಿ ಸೂಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಮಾದಮಂಗಲ ಸರ್ಕಾರಿ ಹಿರಿಯ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಿಂದ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ವಿವಿ‘ ಸ್ಪ‘ಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಮಂಜುನಾಥ್ ಮಾತನಾಡಿ, ದೇಶದ ಮಾಜಿ ಪ್ರ‘ನಿ ಜವಾಹರಲಾಲ್ ನೆಹರೂ ಅವರ ಆದರ್ಶಗಳನ್ನು ಮಕ್ಕಳು ಪಾಲಿಸಬೇಕೆಂದು ತಿಳಿಸಿದರು.
೧೮ ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಮತ ಚಲಾವಣೆಯ ಹಕ್ಕು ಪಡೆದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಶಾಲಾ ಮಕ್ಕಳೊಂದಿಗೆ ಮತದಾರರ ಅರಿವು ಮೂಡಿಸಲು ಮಾದಮಂಗಲ, ಮುಗಳಬೆಲೆ, ಸೂಲಿಕುಂಟೆ ಗ್ರಾಮಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ತೆಗೆದುಹಾಕುವ ಬಗ್ಗೆ ಜಾಥಾ ಕಾರ್ಯಕ್ರಮ ನಡೆಯಿತು.
ಈ ಸಂದ‘ದಲ್ಲಿ ಶಿಕ್ಷಕ ವೃಂದದವರಾದ ಎಲ್.ರಾಜಪ್ಪ, ಎಂ.ಸಿ. ಶಾರದಾಂಬ, ಪುಷ್ಪಾ, ವಿನುತಾ, ಪ್ರ‘ವತಿ, ನಾಗರತ್ನ, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಮತ್ತಿತರರಿದ್ದರು.