ದಿ ಡೈಲಿ ನ್ಯೂಸ್ ಗುಡಿಬಂಡೆ
ತಾಲೂಕಿನ ಪ್ರತಿಯೊಂದು ಹಳ್ಳಿಗೂ ಜಲಜೀವನ್ ಮಿಷನ್ ಯೋಜನೆಯಡಿ ನಳಸಂಪರ್ಕ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿಳಿಸಿದರು. ಮನೆ ಮನೆಗೆ ಗಂಗೆ ಯೋಜನೆಯಡಿ ೪ ಕೋಟಿ ರೂ.ವೆಚ್ಚದ ನಳನೀರು ಸಂಪರ್ಕ ಯೋಜನೆ ಕಾಮಗಾರಿಗಳಿಗೆ ‘ಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಈ ಯೋಜನೆಯನ್ನು ಕೈ ಬಿಟ್ಟಿತ್ತು, ಆದರೆ ಈ ಬಾರಿ ಬಿದ್ದ ಮಳೆಯಿಂದಾಗಿ ಎಲ್ಲ ಕೆರೆಗಳು ತುಂಬಿದ ಹಿನ್ನೆಲೆಯಲ್ಲಿ ಈ ಯೋಜನೆ ಮಾಡಬಹುದೆಂದು ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಅನುಮೋದಿಸಿದ್ದಾರೆ. ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ, ಹಾಗೂ ಎಲ್ಲೋಡು ಗ್ರಾಪಂ ವ್ಯಾಪ್ತಿಯ ಚೌಟಕುಂಟಹಳ್ಳಿ, ಬುಳ್ಳಸಂದ್ರ, ಕಂಬಾಲಹಳ್ಳಿ, ತಿಮ್ಮೇಗಾರಹಳ್ಳಿ, ಗೆಗ್ಗಿರಾಳ್ಳಹಳ್ಳಿ, ಕಮ್ಮಡಿಕೆ, ದಿನ್ನಮೇಲಿನಹಳ್ಳಿ, ಚಿನ್ನೇನಹಳ್ಳಿ, ಕಾಟೇನಹಳ್ಳಿ, ಜಂಬಿಗೆಮರದಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಗಂಗೆ ಯೋಜನೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಎಲ್ಲೋಡು ಗ್ರಾಪಂ ಅ‘ಕ್ಷೆ ಅರುಣಮ್ಮ ನರಸಿಂಹಪ್ಪ, ಹನುಂತರೆಡ್ಡಿ, ಮಮತ ಸೋಮಶೇಖರ್,ಜ್ಯೋತಿ ಶ್ರೀನಹೇರೆಡ್ಡಿ, ಹರೀಶ್, ಕಡೇಹಳ್ಳಿ ಆದಿರೆಡ್ಡಿ, ಪ್ರಕಾಶ್, ರಮೇಶ್, ಕೃಷ್ಣಗೌಡ ಇತರರಿದ್ದರು.