ಬಂಗಾರಪೇಟೆ : ಬರಗಾಲ ಪೀಡಿತವಾದ ಕೋಲಾರ ಜಿಲ್ಲೆಯ ರೈತರು ಹಲವಾರು ವರ್ಷಗಳಿಂದ ಮಳೆಯಿಲ್ಲದೆ ಸಂಕಷ್ಟದಲ್ಲಿದ್ದರು. ಆದರೆ ಈ ಬಾರಿ ರೈತರ ಜೀವನಾಡಿಯಾದ ಮಳೆ ಸಾಕಷ್ಟು ಸುರಿದಿದ್ದು ಕೆರೆ, ಬಾವಿಗಳು ತುಂಬಿ ರೈತರು ಹರ್ಷಗೊಂಡಿರುವ ಜತೆಗೆ ಬದುಕಿನ ನವೋತ್ಸಾಹಕ್ಕೆ ಕಾರಣವಾಗಿತ್ತು. ಆದರೆ ಬಂಗಾರಪೇಟೆ ಗೊಬ್ಬರ ವಿತರಣಾ ಶಾಖೆಯಲ್ಲಿ ಯೂರಿಯಾ ಗೊಬ್ಬರವಿಲ್ಲದೆ ರೈತರು ಸಂಕಟಪಡುವಂತಾಗಿದೆ. ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದರೂ ಅಗತ್ಯಕ್ಕೆ ತಕ್ಕಂತೆ ಸರ್ಕಾರ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡುವುದರಲ್ಲಿ ವಿಲವಾಗಿದೆ, ಕೃಷಿಯನ್ನು ಅವಲಂಬಿಸಿರುವ ನಮ್ಮ ಜೀವನದ ಜೊತೆ ಚೆಲ್ಲಾಟವಾಡಿ ಅನ್ಯಾಯ ಮಾಡಲಾಗುತ್ತಿದೆ ಎಂದು ರೈತರು ಹಿಡಿಶಾಪ ಹಾಕುತ್ತಿದ್ದಾರೆ.