ದಿ ಡೈಲಿ ನ್ಯೂಸ್ ಆನೇಕಲ್
ತಾಲೂಕಿನ ಮರಸೂರು ಗೇಟ್ ಬಳಿಯಿರುವ ಎಂ.ಆರ್. ಸ್ಪೋಟ್ಸ್ ಕ್ಲಬ್ ಆವರಣದಲ್ಲಿ ನಡೆದ ಎಂ.ಆರ್.ಸ್ಪೋಟ್ಸ್ ಅರೇನಾ ಬ್ಯಾಡ್ಮಿಂಟನ್ ಪ್ರೀಮೀಯರ್ ಲೀಗ್ ಪಂದ್ಯಾವಳಿಯಲ್ಲಿ ಎಂ.ಆರ್.ಪೈಟರ್ಸ್, ಎಂ.ಆರ್. ಸ್ಮ್ಯಾ ಶ್ಯರ್ಸ್, ಎಂ.ಆರ್. ರಾಪೋಟರ್ಸ್, ಎಂ. ಆರ್. ವಾರಿಯರ್ಸ್ ತಂಡ ಹಾಗೂ ಎಂ.ಆರ್. ಸಪೋಟರ್ಸ್ ತಂಡಗಳು ‘ಾಗವಹಿಸಿದ್ದವು.
ಇನ್ನು ಎಂ.ಆರ್.ಸ್ಪೋಟ್ಸ್ ಅರೇನಾ ಬ್ಯಾಡ್ಮಿಂಟನ್ ಪ್ರೀಮೀಯರ್ ಲೀಗ್ ಪಂದ್ಯಾವಳಿಯಲ್ಲಿ ಮೊದಲನೆ ಬಹುಮಾನವನ್ನು ಎಂ.ಆರ್. ಪೈಟರ್ ತಂಡ ಪಡೆದುಕೊಂಡರೆ, ಎರಡನೇ ಬಹುಮಾನವನ್ನು ಎಂ. ಆರ್. ವಾರಿಯರ್ಸ್ ತಂಡ ಪಡೆದುಕೊಂಡಿತ್ತು. ಗೆದ್ದಂತಹ ತಂಡಗಳಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು. ಇದೇ ಸಂದ‘ರ್ದಲ್ಲಿ ನೇಪಾಳದ ವಿರುದ್ಧ ಥ್ರೋ ಬಾಲ್ ಆಟದಲ್ಲಿ ಚಿನ್ನದ ಪದಕ ಪಡೆದ ಆನೇಕಲ್ನ ರೇಣುಕಾ ಶ್ರೀನಿವಾಸ್ ಅವರನ್ ಅಭಿನಂದಿಸಲಾಯಿತು. ಬಿಜೆಪಿ ಮುಖಂಡರಾದ ಹುಲ್ಲಳ್ಳಿ ಶ್ರೀನಿವಾಸ್, ಡಾ. ‘ರತ್ ರಾಜ್, ದಿನ್ನೂರು ರಾಜು, ಬನಹಳ್ಳಿ ಶ್ರೀನಿವಾಸ್, ರಾಗಿನಾಡು ಶ್ರೀನಿವಾಸ್, ಎಂ.ಆರ್. ಸ್ಪೋಟ್ಸ್ ಕ್ಲಬ್ನ ಪದಾಧಿಕಾರಿಗಳು ಹಾಜರಿದ್ದರು.