ದಿ ಡೈಲಿ ನ್ಯೂಸ್ ರಾಣಿಬೆನ್ನೂರು
ತಾಲೂಕು ಆಡಳಿತ ಹಾಗೂ ಸಂತ ಸೇವಾಲಾಲ ಜಯಂತ್ಯುತ್ಸವ ಆಚರಣಾ ಸಮಿತಿ ವತಿಯಿಂದ ಮಾ.2ರಂದು ಸಂತ ಶ್ರೀಸೇವಾಲಾಲ ಮಹಾರಾಜರ 284ನೇ ಜಯಂತಿಯನ್ನು ಬಹು ವಿಜೃಂ‘ಣೆಯಿಂದ ಆಚರಿಸಲು ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮಿತಿ ಅ‘್ಯಕ್ಷ ಡಾಕೇಶ ಲಮಾಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.2ರಂದು ಬೆಳಗ್ಗೆ 10-30ಕ್ಕೆ ನಗರದ ಮಿನಿ ವಿ‘ಾನಸೌ‘ದಿಂದ ಸೇವಾಲಾಲ ‘ಾವಚಿತ್ರದ ಮೆರವಣಿಗೆಯು ಡಿ.ಜೆ ಮತ್ತು ಬಂಜಾರಾ ‘ಜನಾ ವಾದ್ಯಮೇಳಗಳೊಂದಿಗೆ ನಗರದ ವಿವಿ‘ ‘ಾಗಗಳಲ್ಲಿ ಸಂಚರಿಸಿ ವಿಕಾಸ ನಗರದ ಸೇವಾಲಾಲ ದೇವಸ್ಥಾನ ಆವರಣಕ್ಕೆ ಬಂದು ಸೇರುವುದು. ಮ‘್ಯಾಹ್ನ 2ಕ್ಕೆ ಜಯಂತ್ಯೋತ್ಸವ ಸಮಾರಂ‘ ಜರುಗಲಿದ್ದು ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ ಸೇವಾಲಾಲ ಸ್ವಾಮೀಜಿ, ಗುಂಡೂರ ಪೀಠದ ತಿಪ್ಪೇರುದ್ರ ಸ್ವಾಮೀಜಿ, ಕೊಟ್ಟೂರಿನ ಶಿವಪ್ರಕಾಶ ಸ್ವಾಮೀಜಿ ಸಾನ್ನಿ‘್ಯ ವಹಿಸುವರು. ಶಾಸಕ ಅರುಣಕುಮಾರ ಪೂಜಾರ ಸಮಾರಂ‘ ಉದ್ಘಾಟಿಸುವರು. ಹಲವು ಗಣ್ಯರು ಪಾಲ್ಗೊಳ್ಳುತ್ತಾರೆ ಎಂದರು. ರಾಮಣ್ಣ ನಾಯಕ, ವಸಂತ ಲಮಾಣಿ, ಬೀರಪ್ಪ ಲಮಾಣಿ, ಪುಟ್ಟಪ್ಪ ಲಮಾಣಿ, ಚಂದ್ರಪ್ಪ ಲಮಾಣಿ, ಬೀಮಸೇನ್ ನಾಯಕ, ಮಾಲತೇಶ ಲಮಾಣಿ, ನಿಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.