ರೈತರ ಒತ್ತಾಸೆಗೆ ಬ್ಯಾಂಕ್ ಸಹಕಾರ

ದಿ ಡೈಲಿ ನ್ಯೂಸ್ ಮಂಡ್ಯ
ನಗರದ ಪಿಎಲ್‌ಡಿ ಬ್ಯಾಂಕ್‌ಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ದಿಢೀರ್ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಸುದೀರ್ಘವಾಗಿ ರೈತರ ಮತ್ತು ಗ್ರಾಹಕರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆ ಉತ್ತಮ ಸ್ಥಾನದಲ್ಲಿದೆ. ಸಾಲ ಪಡೆದ ರೈತರು ಸಾಲ ತೀರಿಸುವುದಿಲ್ಲ ಎಂದು ದೂರಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಅಂಕಿ-ಅಂಶಗಳನ್ನು ನೋಡಿದರೆ ಶೇ.೯೫ರಷ್ಟು ಜನರು ಸಾಲತೀರಿಸಿ, ಹೊಸ ಸಾಲ ಪಡೆದಿದ್ದಾರೆ ಎಂದರು.
ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಸಾಲಸೌಲಭ್ಯ ನೀಡಲಾಗುತ್ತದೆ. ಸಹಕಾರ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸುತ್ತೇವೆ, ಇನ್ನೂ ಹೆಚ್ಚು ಸೌಲಭ್ಯಗಳನ್ನ ರೈತರಿಗೆ ನೀಡುವ ಕೆಲಸ ಮಾಡುತ್ತೇವೆ ಎಂದು ನುಡಿದರು.
ಈ ವೇಳೆ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ಹಾಗೂ ನಿರ್ದೇಶಕರು ಶಾಸಕರನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ಬೂದನೂರು ಸತೀಶ್, ಬಸರಾಳು ಯೋಗೇಶ್, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜ್ ಮತ್ತಿತರರಿದ್ದರು.

 

The Daily News Media

The Daily News Media